alex Certify ವಿದಾಯ ಹೇಳಿದ ಆಟಗಾರರಿಗೆ ಪಂದ್ಯ ಏರ್ಪಡಿಸಲು ಇರ್ಫಾನ್ ಪಠಾಣ್ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದಾಯ ಹೇಳಿದ ಆಟಗಾರರಿಗೆ ಪಂದ್ಯ ಏರ್ಪಡಿಸಲು ಇರ್ಫಾನ್ ಪಠಾಣ್ ಸಲಹೆ

ಭಾರತ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕ್ರಿಕೆಟಿಗರು ವಿದಾಯ ಹೇಳಿದ್ದು, ಕೆಲ ಆಟಗಾರರು ವಿದಾಯ ಪಂದ್ಯ ಆಡದೇ ನಿವೃತ್ತಿ ಹೊಂದಿದ್ದಾರೆ. ಅಂತಹ ಆಟಗಾರರಿಗೆ ಪಂದ್ಯ ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಒತ್ತಾಯಿಸಿದ್ದಾರೆ.

ನಿವೃತ್ತಿ ಘೋಷಿಸಿದ ಆಟಗಾರರ ತಂಡವನ್ನು ಇರ್ಫಾನ್ ಪಠಾಣ್ ಇದೇ ಸಂದರ್ಭದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅನೇಕ ಜನರು ಈಗ ನಿವೃತ್ತ ಆಟಗಾರರಿಗೆ ಬೀಳ್ಕೊಡುಗೆ ಪಂದ್ಯ ಏರ್ಪಡಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಆಟದಿಂದ ಸರಿಯಾದ ರೀತಿಯಲ್ಲಿ ನಿವೃತ್ತಿ ಪಡೆದಿಲ್ಲ. ಪ್ರಸ್ತುತ ತಂಡದ ವಿರುದ್ಧ ನಿವೃತ್ತ ಆಟಗಾರರನ್ನು ಒಳಗೊಂಡಿರುವ ತಂಡದ ಜೊತೆ ಪಂದ್ಯ ಆಯೋಜಿಸಬೇಕು ಎಂದು ಇರ್ಫಾನ್ ಪಠಾಣ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...