alex Certify ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಚ್ ಪರಾಭವದ ಹಿಂದಿನ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಸೋತರೆ, ಡೆಲ್ಲಿ ಕ್ಯಾಪಿಟಲ್ ಗೆಲುವು ಸಾಧಿಸಿತು. ಮೊದ ಮೊದಲು ಆರ್‌ಸಿಬಿಯೇ ವಿನ್ ಆಗುತ್ತೆ ಎಂದುಕೊಂಡಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದ್ದಂತೂ ಸತ್ಯ. ಆಟ ಎಲ್ಲಿ ಮುಗ್ಗರಿಸಿತು ಎಂಬುದೇ ತಿಳಿಯದಾಗಿತ್ತು.

ತಮ್ಮ ಸೋಲಿಗೆ ಕಾರಣ ಏನು, ಮುಂದಿನ ಮ್ಯಾಚ್‌ಗಳಲ್ಲಿ ನಾವು ಏನು ಮಾಡಬೇಕು ಎಂಬುದನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಹೌದು, ನಿನ್ನೆಯ ಸೋಲಿಗೆ ಕಾರಣ ತಿಳಿಸಿದ ವಿರಾಟ್ ಕೊಹ್ಲಿ, ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಮ್ಯಾಚ್ ಸೋತಿದ್ದಕ್ಕೆ ಬೇಸರವಂತೂ ಇದೆ. ನಾವು ಇನ್ನೂ ಚೆನ್ನಾಗಿ ಆಡಬಹುದಿತ್ತು. ಫೀಲ್ಡಿಂಗ್ ಹಾಗೂ ಡೆತ್ ಬೌಲಿಂಗ್‌ನಲ್ಲಿ ಸುಧಾರಣೆ ಕಾಣುವ ಅಗತ್ಯ ತುಂಬಾ ಇದೆ ಎಂದರು.

ಮೊದಲು ಡೆಲ್ಲಿ ಕ್ಯಾಪಿಟಲ್ ಒಳ್ಳೆಯ ಪ್ರದರ್ಶನ ನೀಡಿದರೂ ನಂತರ ನಾವು ಅವರನ್ನು ನಿಯಂತ್ರಣ ಮಾಡಿದೆವು. ಆದರೂ ಕೊನೆಯ ಓವರ್‌ಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದರು. ನಮಗೆ ಅನೇಕ ಅವಕಾಶಗಳು ಮ್ಯಾಚ್‌ನಲ್ಲಿ ಸಿಕ್ಕಿದವು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...