ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಹಾಲಿ ಕ್ಯಾಪ್ಟನ್ ಕೊಹ್ಲಿ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಸರಿಯಾದ ಸಮಯದಲ್ಲಿ ನನ್ನ ಮಗನಿಗೆ ಇವರೆಲ್ಲ ಬೆಂಬಲ ನೀಡಲಿಲ್ಲ ಅಂತ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ.
ಇನ್ನು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧವೂ ಕೆಂಡಾಮಂಡಲವಾಗಿರುವ ಅವರು, ಆಯ್ಕೆ ಸಮಿತಿಯಲ್ಲಿಯೂ ನನ್ನ ಮಗನಿಗೆ ಮೋಸ ಆಗಿದೆ ಎಂದಿದ್ದಾರೆ.
ಆಯ್ಕೆ ಸಮಿತಿ ಸದಸ್ಯ ಶರಣದೀಪ್ ಸಿಂಗ್ ವಿರುದ್ಧ ಹರಿಹಾಯ್ದಿದಿರುವ ಅವರು ಸಭೆ ನಡೆದಾಗಲೆಲ್ಲ ನನ್ನ ಮಗನನ್ನು ಕೈ ಬಿಡುವಂತೆ ಹೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಬೇಕಾದವರೇ ಹೀಗೆ ಮಾಡಿದರೆ ಬೇಜಾರಾಗುವುದು, ಅಸಮಾಧಾನವಾಗುವುದು ಸಹಜ. ನನ್ನ ಮಗ ಉತ್ತಮ ಪ್ರದರ್ಶನ ಕೊಡುತ್ತಿದ್ದರೂ ಅವರಿಗೆ ಸಮಾಧಾನವಿರಲಿಲ್ಲ. ಒಂದಲ್ಲ ಒಂದು ದಿನ ಎಲ್ಲರೂ ವಿದಾಯದ ಸರಣಿ ಆಡಲೇಬೇಕು ಎಂದು ಬೇಸರದಿಂದ ಮಾತನಾಡಿದ್ದಾರೆ.