alex Certify ಟೀಮ್‌ ಇಂಡಿಯಾ ನಾಯಕರಾಗ್ತಾರಾ ಈ ಕನ್ನಡಿಗ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಮ್‌ ಇಂಡಿಯಾ ನಾಯಕರಾಗ್ತಾರಾ ಈ ಕನ್ನಡಿಗ…?

ಮುಂದೆ ಒಂದು ದಿನ ಕನ್ನಡಿಗ ಕೆ.ಎಲ್.ರಾಹುಲ್ ಟೀಮ್ ಇಂಡಿಯಾ ನಾಯಕನಾಗುತ್ತಾರೆ ಎಂದು ಹಿರಿಯ ವೇಗಿ ಎಸ್. ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ. ಹಲೋ ಲೈವ್‌ ನಲ್ಲಿ ಹೀಗಂತ ಶ್ರೀಶಾಂತ್ ಹೇಳಿರುವುದು ಫುಲ್ ವೈರಲ್ ಆಗಿದೆ.

ರಾಹುಲ್ ಬಗ್ಗೆ ಮಾತನಾಡಿರುವ ಅವರು ರಾಹುಲ್ ಉತ್ತಮ ಆಟಗಾರ. ಆತ ಆಟವನ್ನು ಪ್ರೀತಿಸುತ್ತಾನೆ ಎನ್ನುವುದು ಅವರ ಆಟಗಳಲ್ಲಿ ಗೊತ್ತಾಗುತ್ತದೆ. ಆಟದಲ್ಲಿ ಆಸಕ್ತಿ, ಶಿಸ್ತು ಇದೆ. ಯಾವುದೇ ಆಟವನ್ನಾದರೂ ಶ್ರದ್ಧೆಯಿಂದ ಆಡುತ್ತಾರೆ. ತಮ್ಮನ್ನು ತಾವು ಆಟಗಳಲ್ಲಿ ತೊಡಗಿಸುವ ಪರಿ ನನಗೆ ಖುಷಿ ಕೊಟ್ಟಿದೆ.

ಯಾವತ್ತೂ ವೈಯಕ್ತಿಕ ಆಟಗಾರನಾಗಿ ಆಡದೇ ಯಾವಾಗಲೂ ತಂಡದ ಪರವಾಗಿ ಇರುತ್ತಾರೆ. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಳಿಕ ಕರ್ನಾಟಕದ ಕೆ.ಎಲ್. ರಾಹುಲ್ ಟೀಂ ಇಂಡಿಯಾದ ಟೀಮ್ ಕ್ಯಾಪ್ಟನ್ ಆಗಬಹುದು. ಆ ಶಕ್ತಿ ಅವರಲ್ಲಿದೆ ಎಂದು ರಾಹುಲ್‌ನ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...