alex Certify ಜಾಹೀರಾತಿನಲ್ಲಿ ಕೋಟಿ ಗಳಿಸುವ ಧೋನಿ ಕೈಗೊಂಡಿದ್ದಾರೆ ಈ ಮಹತ್ವದ ನಿರ್ಧಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿನಲ್ಲಿ ಕೋಟಿ ಗಳಿಸುವ ಧೋನಿ ಕೈಗೊಂಡಿದ್ದಾರೆ ಈ ಮಹತ್ವದ ನಿರ್ಧಾರ..!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಕೊರೊನಾ ಹಿನ್ನಲೆಯಲ್ಲಿ ಮನೆಯಲ್ಲಿರುವ ಧೋನಿ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಬಾಲ್ಯದ ಆಪ್ತ ಸ್ನೇಹಿತ ಮತ್ತು ವ್ಯವಸ್ಥಾಪಕ ಮಿಹೀರ್ ದಿವಾಕರ್ ಇದಕ್ಕೆ ಕಾರಣವನ್ನು ನೀಡಿದ್ದಾರೆ.

ಧೋನಿ ದೇಹದಲ್ಲಿಯೇ ದೇಶಭಕ್ತಿಯಿದೆ. ಅವ್ರು ಸೈನ್ಯದ ಜೊತೆ ಕೆಲಸ ಮಾಡಿದ್ದಾರೆ. ಸಾಮಾನ್ಯ ರೈತನಂತಿರಲು ಬಯಸುತ್ತಿದ್ದಾರೆ. ಅವ್ರ ಬಳಿ 40 – 50 ಎಕರೆ ಜಮೀನಿದೆ. ಸದ್ಯ ಪಪ್ಪಾಯಿ ಹಾಗೂ ಬಾಳೆಹಣ್ಣು ಬೆಳೆಯುತ್ತಿದ್ದಾರೆ. ಧೋನಿ ಎಲ್ಲಾ ರೀತಿಯ ಬ್ರಾಂಡ್ ಜಾಹೀರಾತು ನಿಲ್ಲಿಸಿದ್ದಾರೆ. ಅವರು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ಕೊರೊನಾದಿಂದ ಮುಕ್ತವಾಗಿ ದೇಶ ಮೊದಲಿನಂತಾಗುವವರೆಗೂ ಅವರು ಇದನ್ನು ಮಾಡಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಧೋನಿ ಯಾವಾಗ ನಿವೃತ್ತಿ ಘೋಷಣೆ ಮಾಡ್ತಾರೆಂಬ ಕುತೂಹಲ ಎಲ್ಲರಿಗೂ ಇದೆ. ಆದ್ರೆ ಈ ಬಗ್ಗೆ ಧೋನಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...