alex Certify ಚೆಂಡಿಗೆ ಎಂಜಲು ಹಚ್ಚುವುದಕ್ಕೆ ಬೀಳಲಿದೆ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಂಡಿಗೆ ಎಂಜಲು ಹಚ್ಚುವುದಕ್ಕೆ ಬೀಳಲಿದೆ ತೆರೆ

ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಬೌಲರ್ ಗಳು ಚೆಂಡಿಗೆ ಹೊಳಪು ಬರುವಂತೆ ಮಾಡಲು ಎಂಜಲು ಹಚ್ಚುವುದು ಹಾಗೂ ಬೆವರಿನಿಂದ ಉಜ್ಜುವುದು ಸಾಮಾನ್ಯ ಸಂಗತಿ. ಆದರೆ ಈಗ ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೋನಾ ಕಾರಣಕ್ಕಾಗಿ ಈ ಪದ್ಧತಿಗೆ ವಿದಾಯ ಹೇಳಲು ಒತ್ತಾಯ ಕೇಳಿಬರುತ್ತಿದೆ.

ಇದೀಗ ಮೇಣದಿಂದ ಸಿದ್ದಗೊಳಿಸಿದ ವಸ್ತುವೊಂದನ್ನು ತಯಾರಿಸಲಾಗಿದ್ದು, ಇದನ್ನು ಚೆಂಡಿನ ಹೊಳಪು ಉಳಿಸಿಕೊಳ್ಳಲು ಬಳಸಬಹುದಾಗಿದೆ ಎಂದು ಆಸ್ಟ್ರೇಲಿಯಾದ ಕುಕಬುರಾ ಕ್ರಿಕೆಟ್ ಚೆಂಡು ತಯಾರಕರು ಹೇಳಿದ್ದಾರೆ.

ಇದು ಇನ್ನೂ ತಯಾರಿಕಾ ಹಂತದಲ್ಲಿದ್ದು ವಿವಿಧ ಹಂತಗಳ ಪರಿಶೀಲನೆ ಬಳಿಕ ಗುಣಮಟ್ಟವನ್ನು ಸುಧಾರಿಸಿ ಮಾರುಕಟ್ಟೆಗೆ ಬಿಡುವ ಸಾಧ್ಯತೆ ಇದೆ. ಇದು ಬಳಕೆಗೆ ಬಂದ ನಂತರ ಚೆಂಡಿಗೆ ಎಂಜಲು ಹಚ್ಚುವ ಪದ್ಧತಿಗೆ ತೆರೆಬೀಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...