alex Certify ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾರಿಗೆ ತಂದಿದ್ದ ಲಾಕ್ ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಈ ಕಾರಣದಿಂದಾಗಿ ದೇಶದಲ್ಲಿ ಕ್ರೀಡೆಗಳ ಆಯೋಜನೆ ಬಗ್ಗೆ ಆಲೋಚನೆ ನಡೆಸಲಾಗ್ತಿದೆ. ಆಗಸ್ಟ್ – ಸೆಪ್ಟೆಂಬರ್ ನಡುವೆ ಬಿಸಿಸಿಐ ತನ್ನ ಆಟಗಾರರಿಗಾಗಿ ಶಿಬಿರ ಆಯೋಜಿಸಲು ಯೋಚಿಸುತ್ತಿದೆ ಎಂಬ ಸುದ್ದಿ ಬಂದಿದೆ.

ಎಲ್ಲ ಆಟಗಾರರಿಗೂ ಒಟ್ಟಿಗೆ ತರಬೇತಿ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಮಾಧ್ಯಮದ ವರದಿಗಳ ಪ್ರಕಾರ, ಮಳೆಗಾಲದ ನಂತರ ಆಟಗಾರರನ್ನು ಕರೆತರಲು ಮತ್ತು ತರಬೇತಿ ನೀಡಲು ಮಂಡಳಿ ಚಿಂತಿಸುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಆಟಗಾರರು ಮನೆಯಲ್ಲಿದ್ದಾರೆ. ವಾಪಸ್ ಅವ್ರ ಫೀಲ್ಡ್ ಗೆ ಮರಳಲು ಸ್ವಲ್ಪ ಸಮಯ ಬೇಕು. ಹಾಗಾಗಿ ಮಳೆಗಾಲ ಮುಗಿದ ನಂತ್ರ ಅವ್ರಿಗೆ ತರಬೇತಿ ನೀಡಲು ಬಿಸಿಸಿಐ ಮುಂದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...