alex Certify ಜಮೀರ್ ಹೇಳಿಕೆ, ಸಿಎಂ ಆಯ್ಕೆ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀರ್ ಹೇಳಿಕೆ, ಸಿಎಂ ಆಯ್ಕೆ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಜಮೀರ್ ಅವರ ಮುಂದಿನ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಮಾತನಾಡುತ್ತಾ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ಪ್ರೊಸೀಜರ್ ಇದೆ. ಡೆಮೊಕ್ರಟಿಕ್ ಮ್ಯಾನರ್ ನಲ್ಲಿ ಮೊದಲು ಶಾಸಕರಿಂದಲೇ ಆಯ್ಕೆ ಮಾಡಲಾಗುವುದು. ಆಮೇಲೆ ಮುಖ್ಯಮಂತ್ರಿ ಯಾರು ಎಂದು ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.

ಯಾರು ಏನೋ ಹೇಳಿಕೆ ಕೊಡುತ್ತಾರೆ ಎಂದು ತಲೆಕೆಡಿಸಿಕೊಳ್ಳಬಾರದು. ಜಮೀರ್ ಅಹಮದ್ ಹೇಳಿಕೆಗಳ ಕುರಿತಾಗಿಯೂ ಪಕ್ಷವೇ ಟೆಕ್ ಕೇರ್ ಮಾಡುತ್ತದೆ. ನನ್ನ ಪ್ರಕಾರ ಜಮೀರ್ ಅಹಮದ್ ಅವರೊಂದಿಗೆ ಹೈಕಮಾಂಡ್ ಈಗಾಗಲೇ ಮಾತನಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಮೀರ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ವೇಳೆ ಸಿದ್ದರಾಮಯ್ಯ ಈ ಕುರಿತು ಬಿಟ್ಟು ಬಿಡ್ರಿ, ಪಕ್ಷವೇ ನೋಡಿಕೊಳ್ಳುತ್ತದೆ ಎಂದು ಗರಂ ಆಗಿದ್ದಾರೆ. ಜಮೀರ್ ಹೇಳಿಕೆಗಳ ವಿವಾದದ ಬಗ್ಗೆ ಪಕ್ಷದಲ್ಲಿಯೇ ಮಾತನಾಡುತ್ತೇವೆ ಎಂದು ಹೇಳಿದ ಅವರು, ಜಮೀರ್ ಹೇಳಿಕೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡದೇ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...