alex Certify BIG BREAKING: ED ದಾಳಿ ಬಳಿಕ ಜಮೀರ್ ಮೊದಲ ಪ್ರತಿಕ್ರಿಯೆ; ಲೂಟಿ ಮಾಡಿಲ್ಲ, ವೈಟ್ ಮನಿಯಲ್ಲಿ ಮನೆ ಕಟ್ಟಿದ್ದೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ED ದಾಳಿ ಬಳಿಕ ಜಮೀರ್ ಮೊದಲ ಪ್ರತಿಕ್ರಿಯೆ; ಲೂಟಿ ಮಾಡಿಲ್ಲ, ವೈಟ್ ಮನಿಯಲ್ಲಿ ಮನೆ ಕಟ್ಟಿದ್ದೇವೆ

ಬೆಂಗಳೂರು: ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿವೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ದಾಳಿ ನಡೆದಿರಬಹುದು. ದಾಳಿ ರಾಜಕೀಯ ಪ್ರೇರಿತವಾಗಿದೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ದಾಳಿ ಕುರಿತಾಗಿ ಕೆಪಿಸಿಸಿ ಅಧ್ಯಕ್ಷರು ಕೂಡ ನಿನ್ನೆ ಪ್ರತಿಕ್ರಿಯೆ ನೀಡಿ ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ದಾಳಿ ರಾಜಕೀಯ ಪ್ರೇರಿತ. ರಾಜಕೀಯದಲ್ಲಿ ಹಲವರು ವಿರೋಧಿಗಳು ಇರುವುದು ನಿಜ ಎಂದು ತಿಳಿಸಿದ್ದಾರೆ.

ಇಡಿ ಧಿಕಾರಿಗಳು ಕೇಳಿದ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಬ್ಯಾಂಕುಗಳಿಂದ ಎಲ್ಲಾ ಮಾಹಿತಿಯನ್ನು ಇಡಿ ಕೂಡ ಪಡೆದುಕೊಂಡಿದೆ. ಅಧಿಕಾರಿಗಳು ನನಗೆ ಯಾವ ನೋಟಿಸ್ ಕೊಟ್ಟಿಲ್ಲ. ವಿಚಾರಣೆಗೆ ಕರೆದಾಗ ಬರುವಂತೆ ಹೇಳಿ ಹೋಗಿದ್ದಾರೆ. ಅವರು ವಿಚಾರಣೆಗೆ ಕರೆದರೆ ನಾನು ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ನಾನು ದುಡಿದ ಹಣದಿಂದ ನನ್ನ ಮನೆಯನ್ನು ನಿರ್ಮಿಸಿದ್ದೇನೆ. ಬಡವರ ದುಡ್ಡು ಬಡವರಿಗೆ ಕೊಟ್ಟಿದ್ದೇನೆ. ನಾವು ಲೂಟಿ ಮಾಡಿಲ್ಲ. ವೈಟ್ ಮನೆಯಿಂದಲೇ ಮನೆ ಕಟ್ಟಿದ್ದೇವೆ. ಅಧಿಕಾರಿಗಳು ಬ್ಯಾಂಕಿನಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ದಾಳಿಯ ಬಳಿಕ ಜಮೀರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...