alex Certify ‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ಗಂಭೀರ ಆರೋಪ ಮಾಡಿ ವಿವಾದಿತ ಹೇಳಿಕೆ ಹಿಂಪಡೆದ ವೈಎಸ್‌ಆರ್‌ಸಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ಗಂಭೀರ ಆರೋಪ ಮಾಡಿ ವಿವಾದಿತ ಹೇಳಿಕೆ ಹಿಂಪಡೆದ ವೈಎಸ್‌ಆರ್‌ಸಿ ಶಾಸಕ

ಕಾಕಿನಾಡ: ಭೀಮವರಂ ಶಾಸಕ ಗ್ರ್ಯಾಂಡಿ ಶ್ರೀನಿವಾಸ್ ಗುರುವಾರ ನಟ ಮತ್ತು ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಒಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಾಸಕರು ಹಿಂದೆ ಸರಿದಿದ್ದು, ತಾವು ಅಂತಹ ಯಾವುದೇ ಕಾಮೆಂಟ್‌ಮಾಡಿಲ್ಲ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ವೈಎಸ್ಆರ್ ಆಸರೆ ಯೋಜನೆಯ ಲಾಭಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಶ್ರೀನಿವಾಸ್, ಪವನ್ ಕಲ್ಯಾಣ್ ಮಹಿಳೆಯರನ್ನು ಗೌರವಿಸುವುದಿಲ್ಲ ಮತ್ತು ಜನ ಸೇನಾ ಬೆಂಬಲಿಗರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೈಎಸ್‌ಆರ್‌ಸಿ ಪಕ್ಷಕ್ಕೆ ಯುವಕರು ತಕ್ಕ ಪಾಠ ಕಲಿಸುತ್ತಾರೆ ಎಂದು ಪವನ್ ಕಲ್ಯಾಣ್ ಹೇಳುತ್ತಾರೆ. ತನ್ನ ಚಿತಾಭಸ್ಮವನ್ನು ದೇಶದಾದ್ಯಂತ ಹರಡಬೇಕು ಎನ್ನುತ್ತಾರೆ. ಇಂತಹ ಹೇಳಿಕೆಗಳು ಯುವಕರನ್ನು ತಪ್ಪು ದಾರಿಗೆ ಎಳೆಯಬಹುದು. ಅವರನ್ನು ಸಮಾಜ ವಿರೋಧಿಗಳನ್ನಾಗಿ ಪರಿವರ್ತಿಸಬಹುದು ಎಂದು ವೈಎಸ್ಆರ್ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಆರೋಪಿಸಿದ್ದು, ಅವರ ಚಿತಾಭಸ್ಮವನ್ನು ರಾಷ್ಟ್ರದಾದ್ಯಂತ ಹರಡಲು ಪವನ್ ಕಲ್ಯಾಣ್ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...