alex Certify ಮೇಕೆ ಕದ್ದ ಆರೋಪ; ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮಾಲೀಕನಿಂದ ಥಳಿತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ಕದ್ದ ಆರೋಪ; ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮಾಲೀಕನಿಂದ ಥಳಿತ…!

ಹೈದರಾಬಾದ್: ಮೇಕೆ ಕದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಥಳಿಸಿರುವ ಘಟನೆ ತೆಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರಿಯಲ್ಲಿ ಈ ಘಟನೆ ನಡೆದಿದ್ದು, ಮೇಕೆ ಕದ್ದಿದ್ದಾರೆ ಎಂದು ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕ, ಇಬ್ಬರು ಯುವಕರನ್ನು ಹಿಡಿದು ತಲೆಕೆಳಗಾಗಿ ನೇತು ಹಾಕಿದ್ದು, ಕೆಳಗಡೆ ಹುಲ್ಲಿಗೆ ಬೆಂಕಿ ಹಾಕಿ, ಬಳಿಕ ಯುವಕರನ್ನು ಮನಬಂದಂತೆ ಥಳಿಸಿದ್ದಾನೆ.

ತೇಜಾ ಹಾಗೂ ಸಿ.ಕಿರಣ್ ಎಂಬುವವರನ್ನು ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...