
ಈ ಎಲ್ಲ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದ ಪ್ರಜೆಗಳು, ಭಾರತದಲ್ಲಿ ಆಶ್ರಯ ಪಡೆದರೂ ಪರವಾಗಿಲ್ಲ. ಈ ದೇಶದಿಂದ ಜೀವಂತವಾಗಿ ಹೋದರೆ ಸಾಕು ಎಂಬ ಮನೋಭಾವ ಹೊಂದಿದ್ದು, ಇದರ ಮಧ್ಯೆ ಪತ್ರಕರ್ತೆಯೊಬ್ಬರೊಂದಿಗೆ ಮಾತನಾಡಿರುವ ವ್ಯಕ್ತಿ, ಪಾಕಿಸ್ತಾನವನ್ನು ಸಹ ನರೇಂದ್ರ ಮೋದಿಯವರೇ ಆಡಳಿತ ಮಾಡಲಿ ಎಂದು ಹೇಳಿದ್ದಾರೆ.
ಭಾರತ – ಪಾಕಿಸ್ತಾನ ವಿಭಜನೆ ಆಗಲೇಬಾರದಿತ್ತು. ವಿಭಜನೆಯಾಗದಿದ್ದರೆ ನಾನು ಹಾಗೂ ನನ್ನ ದೇಶದ ಜನತೆ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಊಟವನ್ನಾದರೂ ಕೊಡಬಹುದಾಗಿತ್ತು. ಆದರೆ ಈಗ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಹೇಳಿದ್ದಾನೆ. ಅಲ್ಲದೆ ಪಾಕಿಸ್ತಾನದಲ್ಲಿ ನಾನು ಹುಟ್ಟಲೇ ಬಾರದಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.