alex Certify BIG NEWS: ದೇಶದ ಪ್ರಸಿದ್ಧ ಅಭಯಾರಣ್ಯದಲ್ಲಿ ಕಾಡ್ಗಿಚ್ಚು – ರಾಜ ಮನೆತನದ ಆಕ್ರೋಶದ ಬಳಿಕ ಎಚ್ಚೆತ್ತ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಪ್ರಸಿದ್ಧ ಅಭಯಾರಣ್ಯದಲ್ಲಿ ಕಾಡ್ಗಿಚ್ಚು – ರಾಜ ಮನೆತನದ ಆಕ್ರೋಶದ ಬಳಿಕ ಎಚ್ಚೆತ್ತ ಸರ್ಕಾರ

ಒಡಿಶಾದ ಸಿಮಿಲಿಪಾಲ್​ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ವಾರದ ಬಳಿಕ ಸೂಕ್ತ ಕ್ರಮಕ್ಕೆ ಒಡಿಶಾ ರಾಜ್ಯ ಸರ್ಕಾರ ಆದೇಶ ನೀಡಿದೆ.

ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಈ ಸಂಬಂಧ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಸಿಮಿಲಿಪಾಲ್​ ವಿಶ್ವದ ಅಮೂಲ್ಯ ಅರಣ್ಯ ಆಸ್ತಿಗಳಲ್ಲಿ ಒಂದಾಗಿದ್ದು, ಕಾಡಿನಲ್ಲಿ ಅಗ್ನಿ ಅವಘಡಗಳು ಮರುಕಳಿಸದಂತೆ ಮುನ್ನಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಬುಧವಾರ ನಿರ್ದೇಶನ ನೀಡಿದ್ದಾರೆ.

ಸಿಮಿಲಿಪಾಲ್​ ಸಂರಕ್ಷಿತ ಅಭಯಾರಣ್ಯ 2750 ಚದರ ಕಿಲೋಮೀಟರ್​​ವರೆಗೆ ವ್ಯಾಪಿಸಿದೆ. ಇಲ್ಲಿ ಬೆಂಕಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯಾಪಿಸುತ್ತಲೇ ಹೋಗಿದೆ. ಸಿಮಿಲಿಪಾಲ್​ ಅರಣ್ಯ ವಿಭಾಗದ ಒಟ್ಟು 21 ಶ್ರೇಣಿಗಳಲ್ಲಿ ಎಂಟು ಕಡೆ ಬೆಂಕಿ ಆವರಿಸಿದೆ. ಇದರಿಂದ ಅಳಿವನಂಚಿನಲ್ಲಿರುವ ಪ್ರಾಣಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ಒಡಿಶಾದ ರಾಜಮನೆತನದ ಟ್ವೀಟ್​ ಬಳಿಕ ಕ್ರಮಕ್ಕೆ ಮುಂದಾಗಿದೆ ಸರ್ಕಾರ.

ಮಯೂರ್​ಭಂಜ್​ನ ಹಿಂದಿನ ರಾಜಮನೆತನದ ರಾಜಕುಮಾರಿ ಅಕ್ಷಿತಾ ಎಂ. ಭಂಜದೇವ್​ ಸಿಮಿಲಿಪಾಲ್​ ದುರಂತದ ಬಗ್ಗೆ ಟ್ವೀಟ್​ ಮಾಡಿದ ಬಳಿಕ ಓಡಿಶಾ ಸರ್ಕಾರ ಅಲರ್ಟ್ ಆಗಿದೆ.

ಮಾರ್ಚ್​ 1ರಂದು ಟ್ವೀಟ್​ ಮಾಡಿದ್ದ ಭಂಜದೇವ್​, ಕಳೆದ ವಾರ ಮಯೂರ್​ಭಂಜ್​ ವಿನಾಶಕಾರಿ ಕಾಡ್ಗಿಚ್ಚಿಗೆ ಸಾಕ್ಷಿಯಾಗಿದೆ. ವಾರದ ಹಿಂದೆ ದಂತಗಳು ಕಂಡು ಬಂದಿದೆ. ಕೆಲ ತಿಂಗಳ ಹಿಂದಷ್ಟೇ ಸ್ಥಳೀಯ ಯುವಕರು ಸಿಮಿಲಿಪಾಲ್​ನಲ್ಲಿ ಮರಳು ಮಾಫಿಯಾ ಬಗ್ಗೆ ವರದಿ ಮಾಡಿದ್ರು. ಕೆಲ ರಾಜ್ಯ ಮಾಧ್ಯಮಗಳನ್ನ ಹೊರತು ಪಡಿಸಿದ್ರೆ ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಏಷ್ಯಾದ 2ನೇ ಅತಿದೊಡ್ಡ ಅಭಯಾರಣ್ಯ ಕಾಡ್ಗಿಚ್ಚಿಗೆ ಒಳಗಾಗಿರೋದನ್ನ ವರದಿ ಮಾಡ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

ಭಂಜದೇವ್​ರ ಈ ಟ್ವೀಟ್​ ಬಳಿಕ ಓಡಿಶಾ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಕೂಡ ಈ ವಿಚಾರದ ಬಗ್ಗೆ ಕ್ರಮಕ್ಕೆ ಆದೇಶ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...