alex Certify ಶಾಕಿಂಗ್​​: ಸ್ವಿಗ್ಗಿ ಆರ್ಡರ್​ ವಿಳಂಬ ಮಾಡಿದ ರೆಸ್ಟಾರೆಂಟ್​ ಮಾಲೀಕನ ಕಗ್ಗೊಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​​: ಸ್ವಿಗ್ಗಿ ಆರ್ಡರ್​ ವಿಳಂಬ ಮಾಡಿದ ರೆಸ್ಟಾರೆಂಟ್​ ಮಾಲೀಕನ ಕಗ್ಗೊಲೆ….!

ಆರ್ಡರ್​ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್​ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಸುನೀಲ್​ ಅಗರ್​ವಾಲ್​ ಎಂದು ಗುರುತಿಸಲಾಗಿದೆ. ಸ್ವಿಗ್ಗಿಯ ಡೆಲಿವರಿ ಏಜೆಂಟ್​​ ರೆಸ್ಟಾರೆಂಟ್​​ಗೆ ಬಂದು ಗ್ರಾಹಕರು ಆರ್ಡರ್​ ಮಾಡಿದ್ದ ಚಿಕನ್​ ಬಿರಿಯಾನಿ ಹಾಗೂ ಪೂರಿ ಸಬ್ಜಿ ನೀಡುವಂತೆ ಹೇಳಿದ್ದ. ಈ ವೇಳೆ ಇನ್ನೂ ಮೂವರು ಇದೇ ರೆಸ್ಟಾರೆಂಟ್​ ಬಳಿ ನಿಂತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಸ್ವಿಗ್ಗಿ ಏಜೆಂಟ್​ಗೆ ಆರ್ಡರ್ ನೀಡಲು ರೆಸ್ಟಾರೆಂಟ್​ ವಿಳಂಬ ಮಾಡಿತ್ತು. ಇದೇ ವೇಳೆ ಮೂವರು ರೆಸ್ಟಾರೆಂಟ್​ ಸಿಬ್ಬಂದಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಈ ವಾಗ್ವಾದ ತಾರಕಕ್ಕೇರಿದ್ದು ಸುನೀಲ್​ ಅಗರ್​ವಾಲ್​ನನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ.

ಕೂಡಲೇ ಸುನೀಲ್​ರನ್ನು ರೆಸ್ಟಾರೆಂಟ್​ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಸುನೀಲ್​ ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರೆಸ್ಟಾರೆಂಟ್​ ಸಮೀಪದಲ್ಲೇ ವಾಸವಿರುವ ರಾಕೇಶ್​ ನಾಗರ್​, ರೆಸ್ಟಾರೆಂಟ್​ ಸಿಬ್ಬಂದಿ ನನಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ರು. ನಾನು ರೆಸ್ಟಾರೆಂಟ್​ ತಲುಪುವ ವೇಳೆ ಅವರಿನ್ನೂ ಉಸಿರಾಡುತ್ತಿದ್ದರು. ನಾನು ಪೊಲೀಸರಿಗೆ ಮಾಹಿತಿ ನೀಡಿ ಆ್ಯಂಬುಲೆನ್ಸ್​ಗೆ ಕರೆ ಮಾಡಿದೆ. ಬಳಿಕ ನಾವು ನಮ್ಮ ವಾಹನದಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...