alex Certify ರಿಷಿ ಕಪೂರ್ ಸಿಗರೇಟ್ ತ್ಯಜಿಸಿದ್ದರ ಹಿಂದಿತ್ತು ಈ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಿ ಕಪೂರ್ ಸಿಗರೇಟ್ ತ್ಯಜಿಸಿದ್ದರ ಹಿಂದಿತ್ತು ಈ ಕಾರಣ…!

2020ರ ಕೊರೊನಾ ಹಾವಳಿಯ ಕರಾಳ ನೆನಪುಗಳಲ್ಲಿ ಬಾಲಿವುಡ್‍ ನ ಚಾರ್ಮಿಂಗ್ ನಟ ರಿಷಿ ಕಪೂರ್ ಅವರ ಸಾವು ಕೂಡ ಇದೆ. ಮನಸ್ಸಿನಲ್ಲಿ ಇರುವುದನ್ನು ಹಾಗೆಯೇ ಹೇಳಿಬಿಡುವ ಸ್ವಭಾವದ ರಿಷಿ ಕಪೂರ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದರು.

ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ನ್ಯೂಯಾರ್ಕ್‍ನಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾಗ ಅವರ ಪತ್ನಿ ನೀತು ಅವರು ಹಲವು ಫೋಟೊಗಳನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಿದ್ದರು.

ಆದರೆ, ರಿಷಿ ಅವರು ಧೂಮಪಾನ ತ್ಯಜಿಸಿದ ಒಂದು ವಿಶೇಷ ಘಟನೆಯನ್ನು ಅವರೇ ತಮ್ಮ ಪುಸ್ತಕ ‘ಖುಲ್ಲಂ ಖುಲ್ಲಾ’ದಲ್ಲಿ ಹೇಳಿಕೊಂಡಿದ್ದಾರೆ. ಎಲ್ಲ ತಂದೆಯರಂತೆಯೇ ಮಗಳ ಮೇಲೆ ರಿಷಿ ಕಪೂರ್ ಅವರಿಗೆ ಅಕ್ಕರೆ ಜಾಸ್ತಿಯಂತೆ. ರಿಷಿ ಅವರು ಸಿಗರೇಟ್ ಸೇದಿಕೊಂಡು ಕೆಲವೊಮ್ಮೆ ಮಗಳು ರಿಧಿಮಾ ಹತ್ತಿರ ಹೋದಾಗ ಅವಳು ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಓಡಿಹೋಗುತ್ತಿದ್ದಳಂತೆ. ಸರಿಯಾಗಿ ಮಗಳನ್ನು ಮುದ್ದು ಮಾಡಲು ಕೂಡ ಆಗುತ್ತಿರಲಿಲ್ಲ. ಹಾಗಾಗಿ ಸಿಗರೇಟ್ ತ್ಯಜಿಸಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ರಾಜಸ್ಥಾನ ಪಂಚಾಯಿತಿ ಚುನಾವಣೆಯಲ್ಲಿ ‘ಕೈ’ ಮುನ್ನಡೆ, 670 ಸೀಟುಗಳಲ್ಲಿ ಜಯಭೇರಿ

ಅಂದಹಾಗೆ, ರಿಷಿ ಕಪೂರ್ ಅವರು ಅಭಿನಯಿಸಿದ ಕೊನೆ ಬಾಲಿವುಡ್ ಸಿನಿಮಾ ‘ಶರ್ಮಾಜೀ ನಮ್‍ಕೀನ್’ ಬಿಡುಗಡೆಗೆ ಸಿದ್ಧಗೊಂಡಿದೆ. ರಿಷಿ ಕಪೂರ್ ಮೃತರಾದ ಹಿನ್ನೆಲೆಯಲ್ಲಿ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಕೊನೆಗೆ ರಿಷಿ ಅವರ ಪಾತ್ರವನ್ನು ಖ್ಯಾತ ಹಿರಿಯ ನಟ ಪರೇಶ್ ರಾವಲ್ ನಿಭಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...