alex Certify BIG NEWS:‌ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ʼಸಚಿನ್​ ತೆಂಡೂಲ್ಕರ್ʼ​​ ಪ್ರತಿಮೆ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ʼಸಚಿನ್​ ತೆಂಡೂಲ್ಕರ್ʼ​​ ಪ್ರತಿಮೆ ಲೋಕಾರ್ಪಣೆ

ಮುಂಬೈನ ಐಕಾನಿಕ್​ ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯು ಸಚಿನ್​ ತೆಂಡೂಲ್ಕರ್​ ಪ್ರತಿಮೆ ಸ್ಥಾಪಿಸಲು ಕೊನೆಯ ಹಂತದ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಅಹಮದ್​ನಗರದಲ್ಲಿ ಪ್ರಸಿದ್ಧ ಚಿತ್ರಕಲಾವಿದ ಹಾಗೂ ಶಿಲ್ಪಿ ಪ್ರಮೋದ್​ ಕಾಂಬಳೆ ಅವರು ಸಚಿನ್​ ತೆಂಡೂಲ್ಕರ್​ ಪ್ರತಿಮೆ ನಿರ್ಮಿಸಿದ್ದಾರೆ.

ಇಂದು (ನವೆಂಬರ್​ 1) ಸಚಿನ್​ ತೆಂಡೂಲ್ಕರ್ ಸಮ್ಮುಖದಲ್ಲಿಯೇ ಕ್ರಿಕೆಟ್​ ದೇವರ ಈ ಪ್ರತಿಮೆಯು ಕ್ರೀಡಾಂಗಣದಲ್ಲಿ ಸ್ಥಾಪನೆಗೊಳ್ಳಲಿದೆ. 2023ರ ಐಸಿಸಿ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದ ಮುನ್ನಾದಿನದಂದು ಈ ಕಾರ್ಯಕ್ರಮ ನಡೆಯುತ್ತಿದೆ, ಈ ಸಮಾರಂಭದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವಿಸ್​ ಸಹ ಭಾಗಿಯಾಗುತ್ತಿದ್ದಾರೆ.

ಈಗಾಗಲೇ ಸಚಿನ್​ ತೆಂಡೂಲ್ಕರ್​ ಸ್ಟ್ಯಾಂಡ್​ ಬಳಿಯಲ್ಲಿ ಇರಿಸಲಾದ ಈ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಭರದಿಂದ ಸಾಗಿದೆ. ಏಪ್ರಿಲ್​ 24ರಂದು ಐವತ್ತನೇ ವರ್ಷಕ್ಕೆ ಕಾಲಿಟ್ಟ ಭಾರತ ರತ್ನ ಪುರಸ್ಕೃತ ಸಚಿನ್​​ ತೆಂಡೂಲ್ಕರ್​ರಿಗೆ ಸಮರ್ಪಿಸಲಾಗಿದೆ.

— ANI (@ANI) October 31, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...