alex Certify ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..!

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್​ ಮರವೊಂದನ್ನ ಏರಿ ಅಪಾಯಕ್ಕೆ ಸಿಲುಕಿದ್ದಾರೆ.

ಮರದ ತುದಿಯನ್ನ ಏರಿದ್ದ ಬೆಕ್ಕೊಂದು ವಾಪಸ್​ ಬರಲಾಗದೇ ಅಪಾಯದಲ್ಲಿತ್ತು. ತನ್ನ ಬೆಕ್ಕನ್ನ ಈ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮರ ಹತ್ತಿದ ವ್ಯಕ್ತಿ ಕೂಡ ಅಪಾಯಕ್ಕೆ ಸಿಲುಕಿದ್ದಾನೆ. ಕೊನೆಗೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದೆ.

ರಕ್ಷಣಾ ಕಾರ್ಯದ ವಿಡಿಯೋವನ್ನ ಅಧಿಕೃತ ಫೇಸ್​ಬುಕ್​ನಲ್ಲಿ ಪೇಜ್​​ನಲ್ಲಿ ಟುಸ್ಲಾ ಅಗ್ನಿಶಾಮಕ ದಳ ಶೇರ್​ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದೆ. ಬೆಕ್ಕನ್ನು ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಮಾಲೀಕನನ್ನ ಏರಿಯಲ್​ ಸಾಧನ ಸಹಾಯದಿಂದ ಬಚಾವು ಮಾಡಲಾಗಿದೆ. ಇತ್ತ ಬೆಕ್ಕನ್ನೂ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...