alex Certify ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಪರಿಸರ ಹವಾಮಾನ ಬದಲಾವಣೆ ಮತ್ತು ತಮಿಳುನಾಡಿನ ಅರಣ್ಯಗಳ ಪ್ರಧಾನ ಕಾರ್ಯದರ್ಶಿಯಾಗಿರುವ ಸುಪ್ರಿಯಾ ಸಾಹು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಕ್ರೋಶಗೊಂಡ ಆನೆಯು ಬಸ್​ ಕಡೆ ನುಗ್ಗಿದ್ದು ವಿಂಡ್​ಶೀಲ್ಡ್​ನ್ನು ಮುರಿದು ಹಾಕಿದೆ.

ವಿಡಿಯೋವನ್ನು ಬಸ್​ನ ಒಳಗಡೆಯಿಂದ ಚಿತ್ರೀಕರಿಸಲಾಗಿದೆ. ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ಬಸ್​ನ್ನು ರಿವರ್ಸ್ ಮಾಡಲು ಮುಂದಾಗಿದ್ದಾರೆ. ಕೆಲ ಸೆಕೆಂಡ್​ಗಳ ಬಳಿಕ ತಮ್ಮ ಸೀಟಿನಿಂದ ಎದ್ದು ನಿಂತ ಚಾಲಕ ಆನೆಯ ಲಕ್ಷ್ಯವನ್ನು ಸೆಳೆದಿದ್ದಾರೆ. ಆ ಸಮಯದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಬಸ್​ನಿಂದ ಇಳಿದಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ 70 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ನೆಟ್ಟಿಗರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

— Supriya Sahu IAS (@supriyasahuias) September 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...