alex Certify ಹೈಕಮಾಂಡ್ ನನಗೆ ಟಿಕೆಟ್ ನಿರಾಕರಿಸಲು ಕಾರಣವಾದ್ರೂ ಏನು…? ಬಳ್ಳಾರಿ ಟಿಕೆಟ್ ಗೆ ಬೇಡಿಕೆ ಇಟ್ಟ ಮಾಜಿ ಸಂಸದ ಉಗ್ರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕಮಾಂಡ್ ನನಗೆ ಟಿಕೆಟ್ ನಿರಾಕರಿಸಲು ಕಾರಣವಾದ್ರೂ ಏನು…? ಬಳ್ಳಾರಿ ಟಿಕೆಟ್ ಗೆ ಬೇಡಿಕೆ ಇಟ್ಟ ಮಾಜಿ ಸಂಸದ ಉಗ್ರಪ್ಪ

ಬಳ್ಳಾರಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನಗೆ ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ತುಕಾರಾಂ ಅವರ ಪುತ್ರಿ, ನಾಗೇಂದ್ರ ಅವರ ಸಹೋದರರ ಹೆಸರು ಚರ್ಚೆಯಾಗುತ್ತಿದೆ. ಹೈಕಮಾಂಡ್ ನನಗೆ ಆಶೀರ್ವಾದ ಮಾಡುತ್ತದೆ ಎನ್ನುವ ವಿಶ್ವಾಸ ಇದೆ. ಹೈಕಮಾಂಡ್ ನನಗೆ ಟಿಕೆಟ್ ನಿರಾಕರಿಸಲು ಏನು ಕಾರಣವಿದೆ ಎಂದು ಪ್ರಶ್ನಿಸಿದ್ದಾರೆ.

ನಾನು ಅಸಮರ್ಥನಾ ಅಥವಾ ನಾನು ಸಕ್ರಿಯವಾಗಿಲ್ಲವಾ? ಯಾವುದಕ್ಕೆ ಟಿಕೆಟ್ ನಿರಾಕರಿಸುತ್ತಾರೆ? ಕಾರಣ ಕೊಡಿ. ಈ ಹಿಂದೆ ಬಳ್ಳಾರಿಯಲ್ಲೇ ನನಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಹೇಳಿದ್ದು. ಸಂಸತ್ತಿಗೆ ಹೋದ ಮೇಲೆ ನನ್ನ ಪರ್ಫಾರ್ಮೆನ್ಸ್ ನೋಡಿಲ್ಲವೇ? ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...