alex Certify ನ್ಯಾಯಾಂಗ ನಿಂದನೆ ಕೇಸ್​: ಕೋರ್ಟ್​ನಲ್ಲಿ‌ ಭೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಯಾಂಗ ನಿಂದನೆ ಕೇಸ್​: ಕೋರ್ಟ್​ನಲ್ಲಿ‌ ಭೇಷರತ್ ಕ್ಷಮೆ ಕೋರಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಆರೋಪಿಯೊಬ್ಬನಿಗೆ ಜಾಮೀನು ನೀಡಿರುವ ಹೈಕೋರ್ಟ್​ ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸುತ್ತಿರುವ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇಂದು ದೆಹಲಿ ಕೋರ್ಟ್ ಮುಂದೆ ವಕೀಲರ ಮೂಲಕ ಬೇಷರತ್​ ಕ್ಷಮೆ ಯಾಚಿಸಿದ್ದಾರೆ.

2018 ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್​ ನವಲಖ ಅವರಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. ಅಂದಿನ ನ್ಯಾಯಮೂರ್ತಿಗಳಾದ ಎಸ್​. ಮುರಳೀಧರ್​ ಅವರ ಮೇಲೆ ಪಕ್ಷಪಾತದ ಆರೋಪ ಹೊರಿಸುವ ರೀತಿಯಲ್ಲಿ ವಿವೇಕ್ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದರು. ಈ ಸಂಬಂಧವಾಗಿ ನ್ಯಾಯಾಲಯವು ನ್ಯಾಯಾಂಗ ನಿಂದನೆ ಕೇಸ್​ ದಾಖಲಿಸಿಕೊಂಡಿತ್ತು.

ಇದಾಗುತ್ತಿದ್ದಂತೆಯೇ ಟ್ವಿಟರ್​ ಅನ್ನು ಅಗ್ನಿಹೋತ್ರಿ ಡಿಲೀಟ್​ ಮಾಡಿದ್ದರು. ಈ ಬಗ್ಗೆ ಅವರ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದರೂ ಕೋರ್ಟ್​ ಇದನ್ನು ಒಪ್ಪಿರಲಿಲ್ಲ. ಮುಂದಿನ ವಿಚಾರಣೆ ವೇಳೆ ವಿವೇಕ್​ ಅವರು ಖುದ್ದು ಹಾಜರಿ ಇದ್ದು ಕ್ಷಮೆ ಕೋರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್​ 16ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಂದು ಖುದ್ದಾಗಿ ವಿವೇಕ್​ ಅಗ್ನಿಹೋತ್ರಿ ಅವರು ಹಾಜರಿರಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...