alex Certify ಮಂಡಿಯುದ್ದದ ಹಿಮದಲ್ಲಿ ನಡೆದು ಬಂದ ಮೇಲೂ ರೆಸ್ಟೋರೆಂಟ್ ಮುಚ್ಚಿದ್ದನ್ನು ಕಂಡು ಬೇಸರಗೊಂಡವನು ಮಾಡಿದ್ದೇನು ನೋಡಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡಿಯುದ್ದದ ಹಿಮದಲ್ಲಿ ನಡೆದು ಬಂದ ಮೇಲೂ ರೆಸ್ಟೋರೆಂಟ್ ಮುಚ್ಚಿದ್ದನ್ನು ಕಂಡು ಬೇಸರಗೊಂಡವನು ಮಾಡಿದ್ದೇನು ನೋಡಿ…?

ಹಿಮವರ್ಷದ ಕಾರಣದಿಂದ ತನ್ನ ಮೆಚ್ಚಿನ ರೆಸ್ಟೋರೆಂಟ್ ಮುಚ್ಚಿದ್ದ ಕಾರಣ ವ್ಯಕ್ತಿಯೊಬ್ಬ ಅಲ್ಲಿಯೇ ತನ್ನ ಮಂಡಿಯೂರಿ ನೋವು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕೆನಡಾದ ಟೊರೊಂಟೋದಲ್ಲಿ ಜರುಗಿದೆ.

ಇಲ್ಲಿನ ಸ್ಕಾರ್‌ಬೊರೋದಲ್ಲಿರುವ ನೈಸೀ’ಸ್ ಈಟರಿಗೆ ಬರಲೆಂದು ಈತ ಮಂಡಿಯುದ್ದದ ಹಿಮವನ್ನೂ ಮೆಟ್ಟಿ ನಡೆದುಕೊಂಡು ಬಂದಿದ್ದಾನೆ. ಆದರೆ ತೀವ್ರ ಹಿಮವರ್ಷದ ಕಾರಣ ರೆಸ್ಟೋರೆಂಟ್ ಮುಚ್ಚಿದ್ದ ಕಾರಣ ಭಾರೀ ನೋವಿನಲ್ಲಿ ಆತ ಅಲ್ಲಿಯೇ ತನ್ನ ಮಂಡಿಗಳ ಮೇಲೆ ಕುಸಿದಿದ್ದಾನೆ.

ʼದೀಪಾವಳಿʼ ಸ್ಟಾಂಪ್ ಬಿಡುಗಡೆ ಮಾಡಿದ ಕೆನಡಾ ಪೋಸ್ಟ್

ಕೆಲ ಕ್ಷಣಗಳ ಬಳಿಕ ಭಾರೀ ಬೇಸರದೊಂದಿಗೆ ತನ್ನ ಮನೆಯತ್ತ ಭಾರವಾದ ಹೆಜ್ಜೆ ಹಾಕುತ್ತಿರುವ ಈತನನ್ನು ಕಂಡ ನೆಟ್ಟಿಗರು ಖುದ್ದು ತಮಗೂ ಸಹ ಮೆಚ್ಚಿನ ರೆಸ್ಟೋರೆಂಟ್ ಮುಚ್ಚಿದೆ ಅಥವಾ ಅಲ್ಲಿ ಮೆಚ್ಚಿನ ಖಾದ್ಯ ಖಾಲಿಯಾಗಿದೆ ಎಂದು ಕೇಳಿದಾಗ ಹಾಗೇ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಘಟನೆಯ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಕಂಡುಕೊಂಡ ನೈಸೀ’ಸ್ ಈಟರಿ, “ನಮ್ಮ ಮೆಚ್ಚಿನ ಗ್ರಾಹಕರೇ, ನೀವು ಯಾರೆಂದು ನಮಗೆ ಗೊತ್ತಿಲ್ಲ ಆದರೆ ನಿಮಗಾಗಿ ನಾವು ಕಾಯಲಿದ್ದೇವೆ. ರೆಸ್ಟೋರೆಂಟ್ ಮುಚ್ಚಿದ್ದಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಬೇಸರ ನಮಗೂ ಆಗುತ್ತಿದ್ದು, ನಿಮ್ಮನ್ನು ಶೀಘ್ರವೇ ಕಾಣಲು ಆಶಿಸುತ್ತೇವೆ. ನಿಮ್ಮ ಮನಸ್ಸಿನಲ್ಲಿ ಇಂದು ಖರೀದಿ ಮಾಡಲು ಇಚ್ಛಿಸಿದ್ದ ತಿನಿಸು ಮಾಡಿಕೊಡುವುದು ಈಗ ನಮ್ಮ ಮೇಲಿದೆ,” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...