alex Certify BIG NEWS: ಒಡಿಶಾ ರೈಲು ದುರಂತದ ಹೊತ್ತಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು…? ಹಳಿ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಡಿಶಾ ರೈಲು ದುರಂತದ ಹೊತ್ತಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು…? ಹಳಿ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ ಮಾಸುವ ಮೊದಲೇ ನಡೆಯಲಿದ್ದ ಮತ್ತೊಂದು ಘೋರ ದುರಂತ ಅದೃಷ್ಟವಶಾತ್ ಕೈತಪ್ಪಿದೆ.

ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಬಾಲಕನೊಬ್ಬ ರೈಲು ಹಳಿಗಳ ಮೇಲೆ ದೂರದವರೆಗೆ ಕಲ್ಲುಗಳನ್ನು ಜೋಡಿಸಿಟ್ಟಿರುವುದು ಕಂಡು ಬಂದಿದೆ. ಆತನನ್ನು ಹಿಡಿದ ವ್ಯಕ್ತಿ ಪ್ರಶ್ನಿಸಿದಾಗ ನಾನು ಆ ರೀತಿ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ.

ಟ್ರ್ಯಾಕ್ ಮೇಲೆ ಕಲ್ಲು ಹಾಕಿದ್ದು ಏಕೆ, ಎಷ್ಟು ದಿನಗಳಿಂದ ಹೀಗೆ ಮಾಡುತ್ತಿದ್ದೀರಿ ಎಂದು ಬಾಲಕನನ್ನು ಪ್ರಶ್ನಿಸಿದಾಗ, ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದೇನೆ ಎಂದು ಬಾಲಕ ತಪ್ಪೊಪ್ಪಿಕೊಂಡಿದ್ದಾನೆ, ಯಾರೂ ಹಾಗೆ ಮಾಡುವಂತೆ ನನಗೆ ಹೇಳಿಲ್ಲ ಎನ್ನುತ್ತಾನೆ.

ಒಬ್ಬ ವ್ಯಕ್ತಿ ಈತನನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದಾಗ, ಬಾಲಕ ಆತನ ಪಾದಗಳನ್ನು ಮುಟ್ಟಿ ಪೊಲೀಸರಿಗೆ ಒಪ್ಪಿಸಬೇಡಿ ಎಂದು ಮನವಿ ಮಾಡುತ್ತಾನೆ.

ಟ್ವಿಟ್ಟರ್ ಬಳಕೆದಾರ ಅರುಣ್ ಪುದೂರ್, ಈ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಷಯವನ್ನು ಪರಿಶೀಲಿಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...