alex Certify ಅಂಗಡಿಯಲ್ಲೇ ಸ್ಪೋಟವಾಯ್ತು ಕೈಯಲ್ಲಿದ್ದ ಮೊಬೈಲ್: ಅದೃಷ್ಟವಶಾತ್ ಮಾಲೀಕ, ಗ್ರಾಹಕ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿಯಲ್ಲೇ ಸ್ಪೋಟವಾಯ್ತು ಕೈಯಲ್ಲಿದ್ದ ಮೊಬೈಲ್: ಅದೃಷ್ಟವಶಾತ್ ಮಾಲೀಕ, ಗ್ರಾಹಕ ಪಾರು

ಮಧ್ಯಪ್ರದೇಶದ ರತ್ಲಾಮ್‌ ನಲ್ಲಿ ಅಂಗಡಿ ಮಾಲೀಕರ ಮುಖದ ಸಮೀಪವೇ ಸೆಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ. ಆದರೂ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಈ ಘಟನೆಯು ರತ್ಲಾಮ್‌ ನ ಜಯೋರಾದ ಹತಿಖಾನಾ ಸಮೀಪ ನಡೆದಿದೆ. ಅಕ್ರಂ ಅನ್ಸಾರಿ ಎಂದು ಗುರುತಿಸಲಾದ ಅಂಗಡಿಯ ಮಾಲೀಕ ಪಾರಾಗಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಶನಿವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಅಂಗಡಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಭಾರೀ ಅಗ್ನಿ ಅನಾಹುತವನ್ನು ತಪ್ಪಿಸಿದ್ದಾರೆ. ದೋಷಪೂರಿತ ಬ್ಯಾಟರಿಗಳನ್ನು ದೇಹದ ಹತ್ತಿರ ಇಟ್ಟುಕೊಳ್ಳಬೇಡಿ ಎಂದು ಅಕ್ರಂ ಅನ್ಸಾರಿ ಸಲಹೆ ನೀಡಿದ್ದಾರೆ.

ಗ್ರಾಹಕರೊಬ್ಬರು ತಮ್ಮ ಮೊಬೈಲ್ ಫೋನ್ ರಿಪೇರಿ ಮಾಡಲು ಬಂದಾಗ, ಮೊಬೈಲ್ ಸ್ಫೋಟಗೊಂಡಿದೆ. ಅಂಗಡಿಯ ಮಾಲೀಕರು ಅದನ್ನು ಎತ್ತಿಕೊಂಡು ಬ್ಯಾಟರಿಯನ್ನು ತೆಗೆಯಲು ಪ್ರಯತ್ನಿಸಿದಾಗ ಸೆಲ್ ಫೋನ್ ಸ್ಫೋಟಗೊಂಡಿತು, ಬೆಂಕಿಯ ದೊಡ್ಡ ಜ್ವಾಲೆ ಸೃಷ್ಟಿಯಾಯಿತು. ಸ್ಫೋಟ ಸಂಭವಿಸಿದ ತಕ್ಷಣ ಗ್ರಾಹಕರು ಮತ್ತು ಅಂಗಡಿ ಮಾಲೀಕ ದೂರ ಸರಿದು ಪಾರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...