alex Certify ಕಿರುತೆರೆ ನಟಿ ಸಾವಿಗೆ ಕಾರಣವಾಯ್ತಾ ಮಾಜಿ ಗೆಳೆಯನ ಕಿರುಕುಳ ? ಕುತೂಹಲ ಕೆರಳಿಸಿದ ʼಡೆತ್‌ ನೋಟ್‌ʼ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುತೆರೆ ನಟಿ ಸಾವಿಗೆ ಕಾರಣವಾಯ್ತಾ ಮಾಜಿ ಗೆಳೆಯನ ಕಿರುಕುಳ ? ಕುತೂಹಲ ಕೆರಳಿಸಿದ ʼಡೆತ್‌ ನೋಟ್‌ʼ ವಿವರ

ಜನಪ್ರಿಯ ಕಿರುತೆರೆ ನಟಿ ವೈಶಾಲಿ ಟಕ್ಕರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದೋರ್‌ ನಲ್ಲಿರುವ ತನ್ನ ಮನೆಯಲ್ಲಿ ಆಕೆ ನೇಣಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತೇಜಾಜಿ ನಗರ ಪೊಲೀಸರು ಘಟನಾ ಸ್ಥಳದಿಂದ ಡೆತ್‌ ನೋಟ್ ವಶಪಡಿಸಿಕೊಂಡಿದ್ದಾರೆ.

ಆತ್ಮಹತ್ಯೆ ಪತ್ರದ ವಿವರ ಇದೀಗ ಬಹಿರಂಗವಾಗಿದ್ದು, ANI ವರದಿಗಳ ಪ್ರಕಾರ, ವೈಶಾಲಿ ಕೆಲ ಸಮಯದಿಂದ ಒತ್ತಡದಲ್ಲಿದ್ದರು ಎನ್ನಲಾಗಿದೆ. ಈ ವಿಷಯವನ್ನು ಆಕೆ ತನ್ನ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ಮಾಜಿ ಗೆಳೆಯನಿಂದ ತನಗೆ ಕಿರುಕುಳವಿತ್ತು ಎಂದೂ ಬರೆದಿದ್ದಾರೆನ್ನಲಾಗಿದೆ.

ಮಾಜಿ ಗೆಳೆಯನ ಹೆಸರನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಕಳೆದ ವರ್ಷ ಏಪ್ರಿಲ್‌ನಲ್ಲಿ ವೈಶಾಲಿ, ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ನಟಿ ಈ ಸಮಾರಂಭದ ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದರು ಮತ್ತು ತಮ್ಮ ಭಾವಿ ಪತಿ ಡಾ. ಅಭಿನಂದನ್ ಸಿಂಗ್ ಅವರ ಹೆಸರನ್ನು ಸಹ ಹೇಳಿದ್ದರು.

ಸಮಾರಂಭದಲ್ಲಿ ಇವರಿಬ್ಬರ ಕುಟುಂಬ ಸದಸ್ಯರು ಹಾಗೂ ಆತ್ಮೀಯರು ಮಾತ್ರ ಪಾಲ್ಗೊಂಡಿದ್ದು, ಅಭಿನಂದನ್ ಕೀನ್ಯಾದಲ್ಲಿ ದಂತ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆದರೆ, ಕೇವಲ ಒಂದು ತಿಂಗಳ ನಂತರ, ವೈಶಾಲಿ ಅವರು ಅಭಿನಂದನ್ ಜೊತೆ ವೈವಾಹಿಕ ಬದುಕಿಗೆ ಕಾಲಿಡುತ್ತಿಲ್ಲ ಎಂದು ತಿಳಿಸಿದ್ದರು.

ಅದೇ ವರ್ಷ ಜೂನ್‌ನಲ್ಲಿ ನಡೆಯಬೇಕಿದ್ದ ತಮ್ಮ ಮದುವೆಯನ್ನು ಈ ಇಬ್ಬರು ರದ್ದುಗೊಳಿಸಿದ್ದರು. ನಟಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ತನ್ನ ನಿಶ್ಚಿತಾರ್ಥ ಸಮಾರಂಭದ ವೀಡಿಯೊವನ್ನೂ ತೆಗೆದುಹಾಕಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...