alex Certify ಮೀನು ಖರೀದಿಗೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಅಮಾಯಕನ ಕಣ್ಣು ಕಿತ್ತು ಕೊಲೆ ಮಾಡಿದ ಪಾಪಿಗಳು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಖರೀದಿಗೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಅಮಾಯಕನ ಕಣ್ಣು ಕಿತ್ತು ಕೊಲೆ ಮಾಡಿದ ಪಾಪಿಗಳು……!

ಮೀನು ಮಾರುತ್ತಿದ್ದ ವ್ಯಕ್ತಿಯನ್ನು ಥಳಿಸಿದ ನಾಲ್ವರು ದುಷ್ಕರ್ಮಿಗಳು ಸ್ಟೀಲ್​ ರಾಡ್​ನಿಂದ ಆತನ ಕಣ್ಣನ್ನು ಕಿತ್ತು ಬಳಿಕ ಎರಡು ಅಂತಸ್ತಿನ ಮನೆಯಿಂದ ಎಸೆದ ಬೆಚ್ಚಿ ಬೀಳಿಸುವ ಘಟನೆ ಉತ್ತರಾಖಂಡ್​ನ ನೈನಿತಾಲ್​ ಜಿಲ್ಲೆಯಲ್ಲಿ ನಡೆದಿದೆ. ಎಂಟು ದಿನಗಳ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮೀನು ಮಾರಾಟಗಾರ ಕೊನೆಯುಸಿರೆಳೆದಿದ್ದಾನೆ.

ಮೃತ ಮೀನು ಮಾರಾಟಗಾರರನ್ನು 33 ವರ್ಷದ ಭಗವಾನ್​ ಸಿಂಗ್​ ಪಡಿಯಾರ್​ ಎಂದು ಗುರುತಿಸಲಾಗಿದೆ. ಈತ ಟೋಕ್​ ನರ್ತೋಲಾ ಗ್ರಾಮದಲ್ಲಿ ಮೀನು ಮಾರಾಟ ಮಾಡುತ್ತಿದ್ದನು. ನವೆಂಬರ್ 2ರ ಸಂಜೆ ಸುಮಾರಿಗೆ ನಾಲ್ವರು ಮೀನು ಖರೀದಿ ಮಾಡಲು ಈತನ ಅಂಗಡಿ ಬಳಿ ಆಗಮಿಸಿದ್ದರು. ಮೀನು ಖರೀದಿಸಿದ ನಾಲ್ವರು ಹಣ ಪಾವತಿಸಲು ಸಿದ್ಧರಿರಲಿಲ್ಲ. ಆದರೆ ಇದಕ್ಕೆ ಭಗವಾನ್​ ಒಪ್ಪದ ಕಾರಣ ಜಗಳ ತಾರಕಕ್ಕೇರಿತ್ತು.

ಭಗವಾನ್​ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ನಾಲ್ವರು ಕಿರಾತಕರು ಸ್ಟೀಲ್​ ರಾಡ್​ ಬಳಸಿ ಆತನ ಕಣ್ಣುಗಳನ್ನು ಕಿತ್ತೆಸೆದಿದ್ದಾರೆ. ಬಳಿಕ ಆತನನ್ನು ಎರಡು ಅಂತಸ್ತಿನ ಮನೆಯ ಛಾವಣಿಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆತನನ್ನು ಕೆಳಗೆ ಎಸೆದಿದ್ದಾರೆ. ಇದಾದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಸಾವಿನ ದವಡೆಯಲ್ಲಿದ್ದ ಭಗವಾನ್​ರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ಸಾವನ್ನಪ್ಪಿದ್ದಾನೆ.

ಭಗವಾನ್​ ಮಾವ ಗಣೇಶ್​ ಸಿಂಗ್​ ಎಂಬವರು ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೌಶಲ್​ ಸಿಂಗ್​, ಸುನೀಲ್​ ಜೋಶಿ, ಭೂಪಾಲ್​ ಸಿಂಗ್​ ಹಾಗೂ ಚಂಚಲ್​ ಸಿಂಗ್​​ ಎಂದು ಗುರುತಿಸಲಾಗಿದೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...