alex Certify BIG NEWS: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವ ವಾರಣಾಸಿ ಕೋರ್ಟ್ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವ ವಾರಣಾಸಿ ಕೋರ್ಟ್ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಕಾಂಪೌಂಡ್​ನ ಭೌತಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿರುವ ವಾರಣಾಸಿ ಸಿವಿಲ್​ ನ್ಯಾಯಾಲಯದ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ ನೀಡಿದೆ.

ವಾರಣಾಸಿ ಸಿವಿಲ್​ ಕೋರ್ಟ್​ನ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್​ ಹೈಕೋರ್ಟ್ ಮೆಟ್ಟಿಲೇರಿದ್ದ ಮಸೀದಿಯ ಸಮಿತಿಯು ಆರಾಧನಾ ಸ್ಥಳ 1991 ಆ್ಯಕ್ಟ್​​ನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿತ್ತು. 1991ರ ಆರಾಧನಾ ಸ್ಥಳ ಕಾಯ್ದೆಯ ಪ್ರಕಾರ 1947ರ ಆಗಸ್ಟ್​ 15ಕ್ಕಿಂತಲೂ ಮೊದಲಿನಿಂದ ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಸ್ಥಳವನ್ನು ಇನ್ನೊಂದು ದೇಗುಲವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ.

ಈ ಪ್ರಕರಣದ ಸಂಬಂಧ ಹೈಕೋರ್ಟ್​ ಆದೇಶ ಕಾಯ್ದಿರಿಸಿದ್ದ ಸಂದರ್ಭದಲ್ಲಿ ಸ್ಥಳೀಯ ನ್ಯಾಯಾಲಯವು ಆದೇಶ ನೀಡಿದೆ. ಈ ಬಗ್ಗೆ ಹೈಕೋರ್ಟ್ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಕೆಳ ಹಂತದ ನ್ಯಾಯಾಲಯವು ಯಾವುದೇ ಆದೇಶ ನೀಡುವಂತಿಲ್ಲ ಎಂದು ಹಿರಿಯ ವಕೀಲ ಎಸ್​ಎಫ್​​ಎ ನಖ್ವಿ ಹೇಳಿದ್ದಾರೆ.

ಏಪ್ರಿಲ್​ 8ರಂದು ಇಬ್ಬರು ಹಿಂದೂ, ಇಬ್ಬರು ಮುಸ್ಲಿಂ ಹಾಗೂ ಓರ್ವ ಪುರಾತತ್ವ ಇಲಾಖೆಯ ಸದಸ್ಯರನ್ನು ಒಳಗೊಂಡ ವಾರಣಾಸಿ ನ್ಯಾಯಾಲಯದ ಪಂಚ ಸದಸ್ಯ ಪೀಠ ಶತಮಾನದಷ್ಟು ಪುರಾತನ ಇತಿಹಾಸವುಳ್ಳ ಜ್ಞಾನವಾಪಿ ಮಸೀದಿ ಸಂಕೀರ್ಣದ ಭೌತಿಕ ಸಮೀಕ್ಷೆಯ ಮೇಲ್ವಿಚಾರಣೆ ನಡೆಸಲು ಆದೇಶ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...