alex Certify ಗಣೇಶನ ಮೂರ್ತಿ ವಿಸರ್ಜಿಸಲು ಹೋಗಿ ಐವರು ಜಲಸಮಾಧಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶನ ಮೂರ್ತಿ ವಿಸರ್ಜಿಸಲು ಹೋಗಿ ಐವರು ಜಲಸಮಾಧಿ..!

ಗಣೇಶ ಮೂರ್ತಿ ವಿಸರ್ಜನೆ ವೇಳೆ ಓರ್ವ ಮಹಿಳೆ ಸೇರಿದಂತೆ ಐವರು ಜಲಸಮಾಧಿಯಾದ ಘಟನೆ ಉತ್ತರ ಪ್ರದೇಶದ ಸದತ್​ಗಂಜ್​ನಲ್ಲಿ ನಡೆದಿದೆ. ಮೃತ ಮಹಿಳೆ ಶವವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸದತ್​​ಗಂಜ್ ನಿವಾಸಿಯಾಗಿದ್ದ ನಾರಾಯಣ ಧಾರ್ ಪಾಂಡೆ (58) ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಭಾನುವಾರ ನೆರೆಹೊರೆಯವರ ಜೊತೆ ಸೇರಿ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ತೆರಳಿದ್ದರು. ಭಾರೀ ಮಳೆಯಿಂದಾಗಿ ಕಲ್ಯಾಣಿಯಲ್ಲಿ ನೀರು ಹೆಚ್ಚಾಗಿತ್ತು. ನಾರಾಯಣ್​ ಧರ್​ ಪಾಂಡೆ ಹಾಗೂ ಧರ್ಮೇಂದ್ರ ಪಾಂಡೆ (20) ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಇದಾದ ಬಳಿಕ ಸೂರಜ್​ ಪಟ್ವಾ (18 ) ಕೂಡ ನೀರಿನಲ್ಲಿ ಮುಳುಗಡೆಯಾದನು. ಪಟ್ವಾ ಹಿರಿಯ ಸಹೋದರ (35) ಹಾಗೂ ತಾಯಿ ಮುನ್ನಿ ದೇವಿ(62) ಕೂಡ ಇವರನ್ನು ರಕ್ಷಿಸಲು ಹೋಗಿ ಜಲಸಮಾಧಿಯಾಗಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಯಮುನಾ ಪ್ರಸಾದ್​ ಮಾಹಿತಿ ನೀಡಿದ್ರು.
ಈಜುಗಾರರ ಸಹಾಯದಿಂದ ಮುನ್ನಿ ದೇವಿ ಮೃತ ದೇಹವನ್ನು ಹೊರತೆಗೆಯಲಾಗಿದೆ. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...