alex Certify ಮಗುವನ್ನು ಕೊಠಡಿಯಲ್ಲೇ ಮರೆತು ಬೀಗ ಹಾಕಿಕೊಂಡು ಮನೆಗೆ ತೆರಳಿದ ಶಿಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವನ್ನು ಕೊಠಡಿಯಲ್ಲೇ ಮರೆತು ಬೀಗ ಹಾಕಿಕೊಂಡು ಮನೆಗೆ ತೆರಳಿದ ಶಿಕ್ಷಕರು

ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ವರದಿ ಆಗಿದೆ. ಬಾಲಕ ಶಾಲೆಯಲ್ಲಿಯೇ ಉಳಿದಿದ್ದಾನೆ ಎಂಬುದು ಶಾಲಾ ಸಿಬ್ಬಂದಿ ಗಮನಕ್ಕೆ ಬಾರದೇ ಇದ್ದುದೇ ಈ ಘಟನೆಗೆ ಕಾರಣ ಎನ್ನಲಾಗಿದೆ.

ಆದಿತ್ಯ ಎಂಬ ಹೆಸರಿನ ಬಾಲಕನನ್ನು ಆತನ ಪೋಷಕರು ಶಾಲೆಗೆ ತೆರಳಿ ಕೊಠಡಿಯ ಬಾಗಿಲು ಒಡೆಯುವ ಮೂಲಕ ರಕ್ಷಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದಂತೆಯೇ ಶಾಲಾ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ವಿಡಿಯೋದಲ್ಲಿ ತರಗತಿಯ ಒಳಗೆ ಸಿಲುಕಿದ ಮಗು ಸಹಾಯಕ್ಕಾಗಿ ಅಳುತ್ತಿರೋದನ್ನು ಕಾಣಬಹುದಾಗಿದೆ. ಗುರುವಾರ ಮಧ್ಯಾಹ್ನವಾದರೂ ಮಗು ಮನೆಗೆ ಬಾರದುದ್ದನ್ನು ಗಮನಿಸಿದ ಪೋಷಕರು ಮಗುವಿಗಾಗಿ ಹುಡುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಗು ತರಗತಿಯೊಳಗೆ ಮಲಗಿದ್ದ. ಇದನ್ನು ಗಮನಿಸದ ಶಾಲಾ ಸಿಬ್ಬಂದಿ ಕೊಠಡಿಗೆ ಬಾಗಿಲು ಹಾಕಿ ಮನೆಗೆ ತೆರಳುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...