alex Certify ನ್ಯಾಯ ಕೇಳಲು ಹೋದ ಗ್ರಾಮಸ್ಥರಿಗೆ ಇದೆಂಥಾ ಶಿಕ್ಷೆ..? ವೈರಲ್ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಯ ಕೇಳಲು ಹೋದ ಗ್ರಾಮಸ್ಥರಿಗೆ ಇದೆಂಥಾ ಶಿಕ್ಷೆ..? ವೈರಲ್ ಆಯ್ತು ವಿಡಿಯೋ

യു.പിയിൽ പരാതിക്കാരനെ കോഴിയെപ്പോലെ ഇരുത്തിയെന്ന്; എസ്.ഡി.എമ്മിനെതിരെ  അന്വേഷണം | UP 'Murga' Scandal: Villager Made To Sit In Humiliating Position  In Front Of SDM In Bareilly; Video Goes ...

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮೀರ್​ಗಂಜ್​​ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಅಧಿಕಾರಿಯು ದೂರದಾರನನ್ನು ಹುಂಜದಂತೆ ಮಂಡಿಯೂರಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಎಸ್​ಡಿಎಂ ತನ್ನ ಖುರ್ಚಿಯಲ್ಲಿ ಕುಳಿತಿರೋದನ್ನ ಕಾಣಬಹುದಾಗಿದೆ. ಹಾಗೂ ದೂರದಾರನು ಮಂಡಿಯೂರಿದ್ದನ್ನು ಸಹ ನೋಡಬಹುದಾಗಿದೆ.

ಎಸ್​ಡಿಎಂನನ್ನು ಉದಿತ್​ ಪವಾರ್​ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಿ ಎಂಬ ಬೇಡಿಕೆಯಿಟ್ಟುಕೊಂಡು ಎಸ್​ಡಿಎಂಗೆ ಬಂದಿದ್ದರು ಎನ್ನಲಾಗಿದೆ. ಅತಿಕ್ರಮಣವಾಗಿದೆ ಎನ್ನಲಾದ ಭೂಮಿಯು ಸದ್ಯ ಸ್ಮಶಾನವಾಗಿ ಬಳಕೆಯಾಗುತ್ತಿದೆ ಎನ್ನಲಾಗಿದೆ.

ಆದರೆ, ಎಸ್‌ಡಿಎಂ ಉದಿತ್ ಪವಾರ್ ಹೇಳಿಕೆಯಲ್ಲಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೆಲ್ಲ ಕೇವಲ ಒಂದು ಕಟ್ಟುಕತೆಯಾಗಿದೆ. ನಮ್ಮ ಗ್ರಾಮದಲ್ಲಿ ಶವಸಂಸ್ಕಾರ ಭೂಮಿಯು ಅಕ್ರಮ ಒತ್ತುವರಿ ಮಾಡಿದ ಭೂಮಿಯಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಅವರೇ ಏಕಾಏಕಿ ನನ್ನ ಎದುರು ಮಂಡಿಯೂರಿ ಕುಳಿತಿದ್ದಾರೆ. ಒಂದು ವೇಳೆ ಆ ಭೂಮಿ ಒತ್ತುವರಿಯಾಗಿದ್ದು ಎಂಬುದು ಸಾಬೀತಾದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿಯವರೆಗೆ ಗ್ರಾಮಸ್ಥರು ತಾಳ್ಮೆಯಿಂದ ಕಾಯಬೇಕು ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...