alex Certify ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು; ಆದರೆ ಈ ಪ್ರೇಮಕಥೆಯಲ್ಲಿತ್ತು ದೊಡ್ಡ ಟ್ವಿಸ್ಟ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು; ಆದರೆ ಈ ಪ್ರೇಮಕಥೆಯಲ್ಲಿತ್ತು ದೊಡ್ಡ ಟ್ವಿಸ್ಟ್‌…..!

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಲವಂತವಾಗಿ ಬೇರೆಯವರನ್ನು ಮದುವೆಯಾದ ಪ್ರೇಮಿಗಳ “ಪ್ರೇಮ”ದ ಜ್ವಾಲೆ ಆರಿರಲಿಲ್ಲ. ವರ್ಷಗಳು ಕೆಲವು ಗತಿಸಿ ಹೋದರೂ, ಆಕೆಯಲ್ಲಿ ಪ್ರೀತಿ ಮತ್ತೆ ಚಿಗುರಿತು. 32 ವರ್ಷದ ಮಹಿಳೆ ಈಗ ಆರು ವರ್ಷದ ಮಗುವಿನ ತಾಯಿ. ಆಕೆ ತನ್ನ ಪ್ರಿಯಕರ 30 ವರ್ಷದ ಚಂದು ಜತೆಗೆ ಮತ್ತೆ ಪ್ರಣಯ ಶುರುಮಾಡಿದ್ದಳು !

ತಮ್ಮ ಸಂಗಾತಿಗಳನ್ನು ಬಿಟ್ಟು ಪ್ರತ್ಯೇಕ ಸಂಸಾರ ಸಾಗಿಸಲು ನಿರ್ಧರಿಸಿದ್ದಾರೆ. ಆದರೆ, ಸಾಮಾಜಿಕ ಕಟ್ಟುಪಾಡುಗಳ ಕಾರಣ ಅದು ಸಾಧ್ಯವಾಗಲಿಲ್ಲ. ನಿರಾಶೆಗೊಳಗಾದ ಅವರು ಒಟ್ಟಿಗೆ ಬದುಕಲಾಗದೇ ಇದ್ದರೆ ಒಟ್ಟಿಗೇ ಸಾಯೋಣ ಎಂದು ನಿರ್ಧರಿಸಿದರು. ಹಾಗೆ ಯಮುನಾ ನದಿ ಸೇತುವೆ ಮೇಲೇರಿದರು. ಅಲ್ಲಿಂದ ಧುಮುಕಿ ಸಾಯಲು ನಿರ್ಧರಿಸಿದ್ದರು. ಯುವತಿ ಹೆಚ್ಚೇನೂ ಯೋಚಿಸದೇ ನದಿಗೆ ಧುಮುಕಿಯೇ ಬಿಟ್ಟಳು. ಬೆನ್ನಿಗೆ ಪ್ರಿಯಕರ ಚಂದು ಕೂಡ ಧುಮುಕುತ್ತಾನೆಂಬ ನಿರೀಕ್ಷೆಯಲ್ಲಿದ್ದಳು ಆಕೆ.

ಆದರೆ, ಚಂದುಗೆ ಬದುಕಿನ ಮೇಲೆ ಆಸೆ ಚಿಗುರಿತ್ತು. ನದಿಗೆ ಹಾರದೇ ಹಿಂದೆ ಬಂದ. ಯುವತಿಗೆ ಸಿಟ್ಟು ನೆತ್ತಿಗೇರಿತ್ತು. ಈಜು ಮೊದಲೇ ಗೊತ್ತಿತ್ತು. ಹೀಗಾಗಿ ಸಾಯದೇ ಈಜಿ ದಡ ಸೇರಿದಳು. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ಚಂದು ವಿರುದ್ಧ ದೂರು ದಾಖಲಿಸಿದ್ದಾಳೆ. ಮೇ 29ಕ್ಕೆ ಈ ಘಟನೆ ನಡೆದಿದ್ದು,
ಚಂದು ವಿರುದ್ಧ ಕೊಲೆ ಯತ್ನ ಮತ್ತು ಪ್ರೇಯಸಿಯ ಮೊಬೈಲ್‌ ಹಾನಿಗೊಳಿಸಿದ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಖ್ಯಾತ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ಸಹೋದರನ ಪುತ್ರ ಅಮೆರಿಕದಲ್ಲಿ ವಿಧಿವಿಶ

ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರಿಗೂ ಅಕ್ರಮ ಸಂಬಂಧ ಇದೆ. ಯುವತಿ ಎರಡು ವಾರಗಳ ಹಿಂದೆ ಪುಣೆಗೆ ಹೋದಾಗ ಅಲ್ಲಿ, ಚಂದು ಬೇರೊಬ್ಬಳನ್ನು ವಿವಾಹವಾಗಿರುವುದು ಗಮನಕ್ಕೆ ಬಂತು. ಯುವತಿಯಿಂದ ಈ ವಿಚಾರವನ್ನು ಚಂದು ಮರೆಮಾಚಿದ್ದ. ಆಕೆ ಗಲಾಟೆ ಮಾಡಿದಾಗ, ವಿಚ್ಚೇದನ ಪಡೆದು ವಿವಾಹವಾಗೋಣ ಎಂದಿದ್ದ ಎಂಬುದು ಬಹಿರಂಗವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...