alex Certify SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!

ಶಾಕಿಂಗ್ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರ ವೈದ್ಯನೊಬ್ಬ ತನ್ನ ಮಡದಿ ಹಾಗೂ ಮಕ್ಕಳನ್ನು ಕೊಂದು ಮನೆ ಬಿಟ್ಟು ಪರಾರಿಯಾಗಿದ್ದಾನೆ.

ತನ್ನ ಕುಟುಂಬದ ಸದಸ್ಯರನ್ನು ಕೊಂದ ಬಳಿಕ ತನ್ನ ಸಹೋದರನಿಗೆ ಕರೆ ಮಾಡಿದ ವೈದ್ಯ, ಈ ಕೊಲೆಗಳ ಬಗ್ಗೆ ಪೊಲೀಸರಿಗೆ ತಿಳಿಸಲು ಹೇಳಿದ್ದಾನೆ.

ಆಪಾದಿತ ವೈದ್ಯ ಸುಶೀಲ್ ಕುಮಾರ್‌ ಇಲ್ಲಿನ ರಾಮಾ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ಔಷಧ ವಿಭಾಗದಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ.

ಮುಂಜಾನೆ ತಂದೆ ಹೊರ ಹೋಗುತ್ತಿದ್ದಂತೆ ಮನೆಗೆ ಬಂದ ಪ್ರಿಯಕರ, ಪುತ್ರಿಯ ಸರಸ ಸಲ್ಲಾಪ ಕಂಡು ಘೋರ ಕೃತ್ಯವೆಸಗಿದ್ದ ಆರೋಪಿ ಅರೆಸ್ಟ್

ಕೋವಿಡ್ ನ ಒಮಿಕ್ರಾನ್ ಅವತರಣಿಕೆಯ ಭೀತಿಯಿಂದ ಈ ಕೊಲೆಗಳನ್ನು ಮಾಡಿದ್ದಾಗಿ ವೈದ್ಯ ಹೇಳಿಕೊಂಡಿದ್ದಾನೆ. ವೈದ್ಯನ ಮಡದಿ ಚಂದ್ರಪ್ರಭಾ (48), ಮಗ ಶಿಖರ್‌ (18) ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿ ಸಂತ್ರಸ್ತರಾಗಿದ್ದಾರೆ.

ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಐದು ಸೊಪ್ಪುಗಳು

ಕಾನ್ಪುರದ ಇಂದಿರಾನಗರದ ಡಿವಿನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಜರುಗಿದೆ. ತನ್ನ ಸಹೋದರ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಸುಶೀಲ್ ಕುಮಾರ್‌ ಅಲ್ಲಿಂದ ಪರಾರಿಯಾಗಿದ್ದಾನೆ.

ಪೊಲೀಸರಿಗೆ ಘಟನಾ ಸ್ಥಳದಲ್ಲಿ ನೋಟ್ ಒಂದು ಸಿಕ್ಕಿದ್ದು, “ನನಗೆ ಹೆಣಗಳನ್ನು ಎಣಿಸಿ ತಲೆ ಕೆಟ್ಟುಹೋಗಿದ್ದು, ಒಮಿಕ್ರಾನ್ ಯಾರೊಬ್ಬರನ್ನೂ ಬಿಡುವುದಿಲ್ಲ,” ಎಂದು ಸುಶೀಲ್ ಕುಮಾರ್‌ ಬರೆದಿದ್ದು, “ನಾನು ನೋವಿನಿಂದ ಪ್ರತಿಯೊಬ್ಬರನ್ನೂ ಮುಕ್ತಿಗೊಳಿಸುತ್ತಿದ್ದೇನೆ,” ಎಂದು ಬರೆದಿದ್ದಾನೆ.

ತಾನು ವಾಸಿಯಾಗದಂಥ ರೋಗದಿಂದ ಬಳಲುತ್ತಿದ್ದು, ತನ್ನಿಂದ ಕುಟುಂಬಸ್ಥರಿಗೆ ನೋವಾಗದಂತೆ ಮಾಡಲು ಹೀಗೆ ಪ್ರತಿಯೊಬ್ಬರಿಗೂ ಮೋಕ್ಷ ನೀಡಿರುವುದಾಗಿ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...