alex Certify ಭೂಗತ ಪಾತಕಿ ಛೋಟಾ ರಾಜನ್ ಮತ್ತೊಮ್ಮೆ ಏಮ್ಸ್ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಗತ ಪಾತಕಿ ಛೋಟಾ ರಾಜನ್ ಮತ್ತೊಮ್ಮೆ ಏಮ್ಸ್ ಆಸ್ಪತ್ರೆಗೆ ದಾಖಲು

ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್​ ಛೋಟಾ ರಾಜನ್​​ರನ್ನು ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊಟ್ಟೆ ನೋವಿನ ಸಮಸ್ಯೆಯಿದೆ ಎಂದು ಛೋಟಾ ರಾಜನ್​ ಹೇಳಿಕೊಂಡಿದ್ದರಿಂದ ಅವರನ್ನ ಪೊಲೀಸರು ಏಮ್ಸ್​ಗೆ ದಾಖಲಿಸಿದ್ದಾರೆ.
ಏಪ್ರಿಲ್​ ತಿಂಗಳಲ್ಲಿ ಕೊರೊನಾ ಸೋಂಕು ಬಂದಿದ್ದ ಹಿನ್ನೆಲೆಯಲ್ಲಿ ಛೋಟಾ ರಾಜನ್​ರನ್ನ ಏಮ್ಸ್​ಗೆ ದಾಖಲು ಮಾಡಲಾಗಿತ್ತು. 61 ವರ್ಷದ ರಾಜನ್​ ದೆಹಲಿಯ ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂಡೋನೇಷಿಯಾದ ಬಾಲಿಯಿಂದ ರಾಜನ್​ರನ್ನ ಗಡಿಪಾರು ಮಾಡಲಾಗಿತ್ತು. ಇದಾದ ಬಳಿಕ ರಾಜನ್​ರನ್ನು ತಿಹಾರ್​ ಜೈಲಿನಲ್ಲಿ ಇಡಲಾಗಿದೆ.

ಮುಂಬೈನಲ್ಲಿ ರಾಜನ್​ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನ ಸಿಬಿಐಗೆ ವರ್ಗಾಯಿಸಲಾಗಿತ್ತು. 2011ರಲ್ಲಿ ನಡೆದ ಪತ್ರಕರ್ತ ಜ್ಯೋತಿರ್ಮಯ್​​ ದೇ ಅವರ ಕೊಲೆ ಆರೋಪದಲ್ಲಿ ರಾಜನ್​ಗೆ 2018ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...