alex Certify ಪತ್ರಕರ್ತರಿಗೆ ಚಹಾ ವಿತರಿಸಿದ ಅಕ್ಷತಾ ಮೂರ್ತಿ: ಬಹುಕೋಟಿ ಒಡತಿಯ ಸರಳತೆಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಕರ್ತರಿಗೆ ಚಹಾ ವಿತರಿಸಿದ ಅಕ್ಷತಾ ಮೂರ್ತಿ: ಬಹುಕೋಟಿ ಒಡತಿಯ ಸರಳತೆಗೆ ಮನಸೋತ ನೆಟ್ಟಿಗರು

ಕೆಲವರು ತಾವು ಎಷ್ಟೇ ದೊಡ್ಡ ಗಣ್ಯವ್ಯಕ್ತಿಗಳಾಗಿದ್ದರೂ ಕೂಡ ತಮ್ಮ ಸರಳತೆಯಿಂದ ಬಹಳ ಸುದ್ದಿಯಾಗುತ್ತಾರೆ. ಇದೀಗ ಬಹುಕೋಟಿ ಒಡತಿ ಅಕ್ಷತಾ ಮೂರ್ತಿ ತಮ್ಮ ಸರಳತೆಗೆ ಸುದ್ದಿಯಾಗಿದ್ದಾರೆ.

ಹೌದು, ತಮ್ಮ ಪತಿ, ಯುಕೆ ಪ್ರಧಾನಿ ಸ್ಥಾನದ ಆಕಾಂಕ್ಷಿ ರಿಷಿ ಸುನಕ್ ಅವರ ನಿವಾಸದ ಹೊರಗೆ ಕಾಯುತ್ತಿದ್ದ ಪತ್ರಕರ್ತರಿಗೆ ಅಕ್ಷತಾ ಮೂರ್ತಿ ಚಹಾ ಮತ್ತು ಬಿಸ್ಕತ್ತುಗಳನ್ನು ವಿತರಿಸಿದ್ದಾರೆ. ಆಕೆಯ ಈ ಕಾಳಜಿಯ ಫೋಟೋಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ನಂತರ ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಲು ರಿಷಿ ಸುನಕ್ ನಿರ್ಧರಿಸಿದ್ದಾರೆ. ವರದಿ ಪ್ರಕಾರ, ಲಂಡನ್‌ನಲ್ಲಿರುವ ತಮ್ಮ ಮನೆಯ ಹೊರಗೆ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಮೂರ್ತಿ ಚಹಾ ಮತ್ತು ಬಿಸ್ಕತ್ತು ನೀಡುತ್ತಿರುವ ವೈರಲ್ ಫೋಟೋಗಳು ಕೆಲವು ದಿನಗಳ ಹಿಂದಿನವು. ವರದಿಯ ಪ್ರಕಾರ, ಸುನಕ್ ನಿವಾಸದಿಂದ ಹೊರಗೆ ಬಂದಿಲ್ಲ ಎನ್ನಲಾಗಿದೆ.

ಸ್ಕೈ ನ್ಯೂಸ್‌ನ ವರದಿಗಾರ ಜೋಶ್ ಗಫ್ಸನ್, ಅಕ್ಷತಾ ಮೂರ್ತಿ ಚಹಾ ತರುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ರಿಷಿ ಸುನಕ್ ಅವರ ಪತ್ನಿಗೆ ಧನ್ಯವಾದ. ಅವರ ಮನೆಯ ಹೊರಗೆ ಕಾದಿದ್ದ ನಮಗೆ ಚಹಾ ಮತ್ತು ಬಿಸ್ಕತ್ತುಗಳನ್ನು ತಂದರು. ಚಹಾ ಬಹಳ ಚೆನ್ನಾಗಿತ್ತು” ಎಂದು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...