alex Certify ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಕನ್ನಯ್ಯ ಲಾಲ್ ರಕ್ಷಣೆಗೆ ಏಕಾಂಗಿಯಾಗಿ ಸೆಣಸಿದ್ದ ‘ಸಹೋದ್ಯೋಗಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಕನ್ನಯ್ಯ ಲಾಲ್ ರಕ್ಷಣೆಗೆ ಏಕಾಂಗಿಯಾಗಿ ಸೆಣಸಿದ್ದ ‘ಸಹೋದ್ಯೋಗಿ’

ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಅವರ ಹತ್ಯೆಯಾಗಿದ್ದು, ಈ ಪೈಶಾಚಿಕ ಘಟನೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದೆ ಕನ್ನಯ್ಯ ಲಾಲ್ ಅವರ ಹತ್ಯೆಗೆ ಕಾರಣವಾಗಿದೆ.

ಬುಧವಾರದಂದು ಅಳತೆ ಕೊಡುವ ಸೋಗಿನಲ್ಲಿ ಕನ್ನಯ್ಯ ಲಾಲ್ ಅವರ ಟೈಲರ್ ಶಾಪಿಗೆ ಹೋದ ಮಹಮ್ಮದ್ ರಿಯಾಜ್ ಮತ್ತು ಗೌಸ್ ಮಹಮ್ಮದ್ ಎಂಬ ದುಷ್ಕರ್ಮಿಗಳು ಬಳಿಕ ಹರಿತವಾದ ಆಯುಧದಿಂದ ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೃತ್ಯವನ್ನು ತಮ್ಮ ಮೊಬೈಲ್ ನಲ್ಲೂ ಆರೋಪಿಗಳು ಸೆರೆ ಹಿಡಿದಿದ್ದರು.

ಈ ವೇಳೆ ಸ್ಥಳದಲ್ಲಿದ್ದವರು ಭಯಭೀತರಾಗಿ ಓಡಿ ಹೋಗಿದ್ದರೆ ಕನ್ನಯ್ಯ ಲಾಲ್ ಸಹೋದ್ಯೋಗಿ ಈಶ್ವರ್ ಸಿಂಗ್ ಎಂಬವರು ಮಾತ್ರ ದುಷ್ಕರ್ಮಿಗಳ ವಿರುದ್ಧ ಹೋರಾಟ ನಡೆಸಿದ್ದರು. ಕನ್ನಯ್ಯ ಲಾಲ್ ರಕ್ಷಣೆಗಾಗಿ ಸತತ ಪ್ರಯತ್ನಪಟ್ಟರೂ ಇದು ಸಾಧ್ಯವಾಗಿರಲಿಲ್ಲ.

ಈ ಸೆಣಸಾಟದಲ್ಲಿ ಈಶ್ವರ್ ಸಿಂಗ್ ಅವರಿಗೆ ತೀವ್ರ ಗಾಯಗಳಾಗಿದ್ದು ಅವರಿಗೆ 16 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಅವರು ಉದಯ್ ಪುರದ ಮಹಾರಾಣಾ ಭೂಪಾಲ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...