alex Certify BIG NEWS: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ; DHO ಕಚೇರಿಗೆ ಬೀಗ ಹಾಕಿ ತೆರಳಿದ ಅಧಿಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ; DHO ಕಚೇರಿಗೆ ಬೀಗ ಹಾಕಿ ತೆರಳಿದ ಅಧಿಕಾರಿ…!

ಬೆಂಗಳೂರು: ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದ್ದು, ಆರೋಗ್ಯಾಧಿಕಾರಿ ಕಚೇರಿಗೇ ಬೀಗ ಜಡಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಹಳೆ ಡಿ ಹೆಚ್ಒ ವಿಜಯೇಂದ್ರ ಹಾಗೂ ಹೊಸ ಡಿಹೆಚ್ಒ ಸುನೀಲ್ ಕುಮಾರ್ ನಡುವೆ ಹುದ್ದೆಗಾಗಿ ಕಿತ್ತಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯ ಡಿಹೆಚ್ಒ ಕಚೇರಿಗೆ ಬೀಗ ಹಾಕಲಾಗಿದೆ.

ಹಳೆ ಆರೋಗ್ಯಾಧಿಕಾರಿ ವಿಜಯೇಂದ್ರ ವರ್ಗಾವಣೆ ಆದೆಶಕ್ಕೆ ತಡೆ ತಂದಿದ್ದಾರೆ. ಇದರಿಂದ ಹೊಸ ಆರೋಗ್ಯಾಧಿಕಾರಿಯಾಗಿ ನೇಮಕಗೊಂಡಿರುವ ಸುನೀಲ್ ಕುಮಾರ್ ಚಪ್ಪರಕಲ್ಲು ಬಳಿಯ ಡಿಹೆಚ್ಒ ಕಚೇರಿಗೆ ಬೀಗ ಹಾಕಿ ತೆರಳಿದ್ದಾರೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...