alex Certify ಸ್ನೇಹಿತನ ಮೃತದೇಹ ಎಸೆಯುವಾಗ ಆಯತಪ್ಪಿ ಬಿದ್ದು ಸತ್ತ ಆರೋಪಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಮೃತದೇಹ ಎಸೆಯುವಾಗ ಆಯತಪ್ಪಿ ಬಿದ್ದು ಸತ್ತ ಆರೋಪಿ…!

ಕೊಲ್ಹಾಪುರ: ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಕೊಲೆ ಮಾಡಿದ ಯುವಕನೊಬ್ಬ ಆತನ ಮೃತದೇಹವನ್ನು ಬೆಟ್ಟದಿಂದ ಕೆಳಕ್ಕೆ ತಳ್ಳುವ ಸಮಯದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಕೊಲ್ಹಾಪುರದಿಂದ ಸಾವಂತವಾಡಿಗೆ ಹೋಗುವ ಮಾರ್ಗದಲ್ಲಿರುವ ಅಂಬೋಲಿ ಘಾಟ್  ನಲ್ಲಿ ಈ ಘಟನೆ ನಡೆದಿದ್ದು, ಯುವಕನ ಶವವನ್ನು ಎಸೆಯಲು ಪ್ರಯತ್ನಿಸಿದ್ದ ಇನ್ನೊಬ್ಬ ಕೂದಲೆಳೆ ಅಂತರದಿಂದ ಪವಾಡಸದೃಶವಾಗಿ ಬಚಾವ್​ ಆಗಿದ್ದಾನೆ.

ಭೌಸೋ ಮಾನೆ ಎಂಬಾತ ಸುಶಾಂತ್ ಕಿಲರೆ (30) ಎಂಬಾತನ ಕೊಲೆ ಮಾಡಿ ಈಗ ತಾನೂ ಸತ್ತಿದ್ದಾನೆ. ಪವಾರ್​ ಎಂಬಾತ ಪವಾಡಸದೃಶವಾಗಿ ಬದುಕಿದ್ದಾನೆ. ಮೂವರೂ ಸತಾರಾದ ಕರಡ್ ನಿವಾಸಿಗಳು. ಮೃತ ದೇಹವನ್ನು ಬೆಟ್ಟದ ಇಳಿಜಾರಿನಲ್ಲಿ ಎಸೆಯುವಾಗ ಮಾನೆ ಸಮತೋಲನ ಕಳೆದುಕೊಂಡು ಬಿದ್ದಿರುವುದಾಗಿ ಪವಾರ್​ ಹೇಳಿದ್ದಾನೆ. ಕೊನೆಗೆ ಭಯಪಟ್ಟು, ಸಮೀಪದ ದೇವಸ್ಥಾನಕ್ಕೆ ತೆರಳಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾನೆ. ಮಾನೆ ಮತ್ತು ಪವಾರ್ ಅವರು ಕಿಲರೆ ಶವವನ್ನು ಅಲ್ಲಿ ಎಸೆಯಲು ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿಮೀ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...