alex Certify ಮನೆ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಬಿಜೆಪಿ ಪ್ಲಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಬಿಜೆಪಿ ಪ್ಲಾನ್​

ತಮಿಳುನಾಡಿನ ಬಿಜೆಪಿ ಘಟಕವು ಹಿಂದೂಗಳ ಹಬ್ಬದ ಸಂಭ್ರಮಾಚರಣೆಯನ್ನು ಮೊಟಕುಗೊಳಿಸುವ ಡಿಎಂಕೆ ಸರ್ಕಾರದ ಪ್ರಯತ್ನವನ್ನು ವಿರೋಧಿಸುವ ನಿಮಿತ್ತ ಮನೆಯ ಮುಂದೆಯೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಜನತೆ ಬಳಿ ಮನವಿ ಮಾಡಿದೆ.

ಈ ವಿಚಾರವಾಗಿ ಮಾತನಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ , ಬಿಜೆಪಿಯ ಪರವಾಗಿ ನಾವು ಭಕ್ತರ ನಿವಾಸದ ಎದುರು 1 ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡುವ ಗುರಿ ಹೊಂದಿದ್ದೇವೆ. ಈ ಪ್ರಯತ್ನದಲ್ಲಿ ನಮಗೆ ತಮಿಳುನಾಡು ಜನತೆಯ ಸಹಾಯ ಬೇಕು ಎಂದು ಹೇಳಿದ್ರು.

ಡಿಎಂಕೆ ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ಗಣೇಶ ಚತುರ್ಥಿ ಹಬ್ಬಕ್ಕೆ ನಿರ್ಬಂಧ ಹೇರುವ ಮೂಲಕ ಹಿಂದೂ ವಿರೋಧಿ ಕೆಲಸ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ಗೆ ಅಂಚೆ ಮೂಲಕ ಗಣೇಶ ಚತುರ್ಥಿ ಶುಭಾಶಯ ಕೋರುವಂತೆ ಪಕ್ಷದ ಕಾರ್ಯಕರ್ತರಿಗೆ ಅಣ್ಣಾಮಲೈ ಸೂಚನೆ ನೀಡಿದ್ದಾರೆ.

ಕೊರೊನಾ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಡಿಎಂಕೆ ಸರ್ಕಾರವು ಗಣೇಶ ಮೂರ್ತಿ ಮೆರವಣಿಗೆಯನ್ನು ವಿಜೃಂಭಣೆಯಿಂದ ಆಚರಿಸಲು ನಿಷೇಧ ಹೇರುವ ಬಗ್ಗೆ ಹೇಳಿಕೆ ನೀಡಿದೆ. ಸೆಪ್ಟೆಂಬರ್​ 8ರಂದು ಮದರ್​ ಮೇರಿ ಜಯಂತಿಯಂದು ನಾಗಪಟ್ಟಣಂನಂತಹ ಜಿಲ್ಲೆಯಲ್ಲಿ ಚರ್ಚ್​ಗಳ ಸಾರ್ವಜನಿಕ ಆಚರಣೆಗೂ ಡಿಎಂಕೆ ಸರ್ಕಾರ ಕೊಕ್​ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...