alex Certify ಕೆಲ ರಾಶಿಯವರಿಗೆ ಇರಲಿದೆ ಸದಾ ಸಂತೋಷ, ಆರ್ಥಿಕ ವೃದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲ ರಾಶಿಯವರಿಗೆ ಇರಲಿದೆ ಸದಾ ಸಂತೋಷ, ಆರ್ಥಿಕ ವೃದ್ಧಿ

ಅದೃಷ್ಟ ಎಲ್ಲರಿಗೂ ಒಲಿಯುವುದಿಲ್ಲ. ಲಕ್ಷ್ಮಿ ಕೃಪೆಗೆ ಪಾತ್ರರಾಗುವುದು ಸುಲಭವಲ್ಲ. ಲಕ್ಷ್ಮಿ ಮನೆಗೆ ಬಂದ್ರೆ ಹಣದ ಹೊಳೆ ಹರಿಯುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ವ್ಯಕ್ತಿಯ ಭವಿಷ್ಯ ಆತನ ಜನನವನ್ನು ಆಧರಿಸಿರುತ್ತದೆ. ರಾಶಿಗಳು ಕೂಡ ಮನುಷ್ಯ ಬಡತನ-ಶ್ರೀಮಂತಿಕೆಯನ್ನು ನಿರ್ಧರಿಸುತ್ತದೆ. ಕೆಲ ರಾಶಿಯ ಜನರು ಸದಾ ಸಂತೋಷ, ಆರ್ಥಿಕ ವೃದ್ಧಿ ಕಾಣುತ್ತಾರೆ. ಅವರಿಗೆ ಲಕ್ಷ್ಮಿ ಕೃಪೆ ಯಾವಾಗ್ಲೂ ಇರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದವಿದೆ ಎಂಬುದನ್ನು ನೋಡೋಣ.

ವೃಷಭ ರಾಶಿಯ ಅಧಿಪತಿ ಶುಕ್ರ. ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಐಷಾರಾಮಿ ಮತ್ತು ಪ್ರಣಯದ ಸಂಕೇತವೆನ್ನಲಾಗುತ್ತದೆ. ಈ ರಾಶಿ ಜನರು ಯಾವಾಗಲೂ ಆರ್ಥಿಕ ಸಮಸ್ಯೆ ಎದುರಿಸುವುದಿಲ್ಲ. ಅದೃಷ್ಟವಂತ ಈ ರಾಶಿಯವರು ಯಾವಾಗ್ಲೂ ಲಾಭದಲ್ಲಿರುತ್ತಾರೆ.

ಕರ್ಕ ರಾಶಿಯವರಿಗೂ ಲಕ್ಷ್ಮಿ ಕೃಪೆಯಿರುತ್ತದೆ. ಇವರು  ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಕಷ್ಟಪಟ್ಟು ದುಡಿಯಲು ಈ ರಾಶಿಯವರ ಹಿಂದೆ ಬೀಳುವುದಿಲ್ಲ. ಹಾಗಾಗಿಯೇ ಇವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗುವುದಿಲ್ಲ.

ಸಿಂಹ ರಾಶಿ ಜನರು ನಾಯಕತ್ವದ ವಿಷ್ಯದಲ್ಲಿ ಶ್ರೀಮಂತರಾಗಿರುತ್ತಾರೆ. ಐಷಾರಾಮಿ ವಸ್ತುಗಳನ್ನು ಖರೀದಿಸಲು ಶ್ರಮಿಸುತ್ತಾರೆ. ಕಠಿಣ ಕೆಲಸ ಮಾಡಿ ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ.

ವೃಶ್ಚಿಕ ರಾಶಿಯ ಜನರು ಭೌತಿಕ ಸಂತೋಷವನ್ನು ಪಡೆಯಲು ಬಹಳ ಆಸೆಯನ್ನು ಹೊಂದಿರುತ್ತಾರೆ. ಶ್ರೀಮಂತರಾಗಲು ಈ ರಾಶಿ ಜನರು ಸದಾ ದುಡಿಯುತ್ತಾರೆ. ಕಠಿಣ ಪರಿಶ್ರಮದ ಗುಣಗಳಿಂದಾಗಿ ಈ ರಾಶಿಯ ಜನರು ಆರ್ಥಿಕ ವಿಷ್ಯದಲ್ಲಿ ಮುಂದಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...