alex Certify BIG BREAKING NEWS: ಬಿಜೆಪಿ ನಾಯಕನ ಮೇಲೆ ಭಯೋತ್ಪಾದಕರ ದಾಳಿ, ಗುಂಡು ಹಾರಿಸಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಬಿಜೆಪಿ ನಾಯಕನ ಮೇಲೆ ಭಯೋತ್ಪಾದಕರ ದಾಳಿ, ಗುಂಡು ಹಾರಿಸಿ ಹತ್ಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಭಾರತೀಯ ಜನತಾ ಪಕ್ಷದ(ಬಿಜೆಪಿ)ನಾಯಕನನ್ನು ಭಯೋತ್ಪಾದಕರು ಮಂಗಳವಾರ ಹತ್ಯೆ ಮಾಡಿದ್ದಾರೆ.

ಕುಲ್ಗಾಂನ ಹೋಮ್ಶಾಲಿಬಾಗ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಾವೀದ್ ಅಹ್ಮದ್ ದಾರ್ ಅವರ ಮೇಲೆ ಕುಲ್ಗಾಂನ ಬ್ರಜ್ಲೋ ಜಾಗಿರ್ ನಲ್ಲಿ ಉಗ್ರರು ಗುಂಡು ಹಾರಿಸಿದ್ದು, ನಂತರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಈ ವೇಳೆಗಾಗಲೇ ಮೃತಪಟ್ಟಿದ್ದಾರೆನ್ನಲಾಗಿದೆ.

ಕಾಶ್ಮೀರದ ಬಿಜೆಪಿಯ ಮಾಧ್ಯಮ ಸೆಲ್ ಮುಖ್ಯಸ್ಥ ಮಂಜೂರ್ ಅಹ್ಮದ್ ಹತ್ಯೆಯನ್ನು ಖಂಡಿಸಿದ್ದಾರೆ. ಜಾವೀದ್ ಅಹ್ಮದ್ ದಾರ್ ಆಗಸ್ಟ್‌ ನಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಎರಡನೇ ಬಿಜೆಪಿ ನಾಯಕರಾಗಿದ್ದಾರೆ.

ಆಗಸ್ಟ್ 9 ರಂದು ಭಯೋತ್ಪಾದಕರು ಅನಂತನಾಗ್‌ ನ ಲಾಲ್ ಚೌಕ್ ಪ್ರದೇಶದಲ್ಲಿ ಗುಲಾಂ ರಸೂಲ್ ದಾರ್ ಮತ್ತು ಅವರ ಪತ್ನಿ ಜವಾಹರಾ ಬಾನು ಅವರ ಮೇಲೆ ಗುಂಡು ಹಾರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...