alex Certify BIG UPDATE : ತರೀಕೆರೆಯಲ್ಲಿ ಭೀಕರ ಬಸ್ ಅಪಘಾತ : ಓರ್ವ ಬಾಲಕಿ ಸಾವು, ಇನ್ನೊಬ್ಬಳ ಸ್ಥಿತಿಯೂ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG UPDATE : ತರೀಕೆರೆಯಲ್ಲಿ ಭೀಕರ ಬಸ್ ಅಪಘಾತ : ಓರ್ವ ಬಾಲಕಿ ಸಾವು, ಇನ್ನೊಬ್ಬಳ ಸ್ಥಿತಿಯೂ ಗಂಭೀರ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರದಲ್ಲಿ ನಡೆದ ಭೀಕರ ಬಸ್ ಅಪಘಾತ ಪ್ರಕರಣದಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದು, ಮತ್ತೋರ್ವ ಬಾಲಕಿ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಶಾಲೆಗೆ ತೆರಳಲು ಬಸ್ ಗಾಗಿ ಕಾಯುತ್ತ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ ಹರಿದಿದ್ದು, ಪರಿಣಾಮ ಐವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಬಾಲಕಿ 8 ನೇ ತರಗತಿ ವಿದ್ಯಾರ್ಥಿನಿ ತುಳಸಿ ಚಿಕಿತ್ಸೆ ಫಲಿಸದೇ ಮೃತಪಟ್ಟರೆ, ಇನ್ನೋರ್ವ ಬಾಲಕಿ ಸ್ಥಿತಿ ಕೂಡ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ. ದುಗ್ಲಾಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ಭೀಕರ ಘಟನೆ ನಡೆದಿದೆ. ನಗು ನಗುತ್ತಲ್ಲೇ ಶಾಲೆಗೆ ಹೊರಟ ಓರ್ವ ಬಾಲಕಿ ಮೃತಪಟ್ಟಿದ್ದಾರೆ. ರೊಚ್ಚಿಗೆದ್ದ ಜನರು ಬಸ್ ಗಾಜು ಒಡೆದು ಹಾಕಿದ್ದಾರೆ.

ಐಎಎಸ್ ಅಧಿಕಾರಿ ಕನಸು ಕಂಡಿದ್ದ ಬಾಲಕಿ

ಮೃತ ಬಾಲಕಿ ತುಳಸಿ 8 ನೇ ತರಗತಿ ಓದುತ್ತಿದ್ದಳು. ತಾನು ಐಎಎಸ್ ಅಧಿಕಾರಿ ಆಗುತ್ತೇನೆ ಎಂದು ಕನಸು ಕಂಡಿದ್ದಳು. ಅಲ್ಲದೇ ಶಾಲೆಗೆ ನಾನೇ ಫಸ್ಟ್ ಎಂದು ಅಮ್ಮನ ಬಳಿ ಹೇಳಿಕೊಂಡಿದ್ದಳಂತೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ, ಛೀರಾಟ ಮುಗಿಲು ಮುಟ್ಟಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...