alex Certify BIG NEWS: ‘ಮೀಟೂ’ ಆರೋಪ ಮಾಡಿದ್ದ ತನುಶ್ರೀ ದತ್ತಾರಿಂದ ಮತ್ತೊಂದು ಸ್ಪೋಟಕ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಮೀಟೂ’ ಆರೋಪ ಮಾಡಿದ್ದ ತನುಶ್ರೀ ದತ್ತಾರಿಂದ ಮತ್ತೊಂದು ಸ್ಪೋಟಕ ಹೇಳಿಕೆ

ತನುಶ್ರೀ ದತ್ತಾ ಗೊತ್ತಿರಬೇಕಲ್ಲ, ಬಾಲಿವುಡ್​ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ನಟಿ. ಈಕೆಗೆ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದು, ಆ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ “ಮೀಟು ಚಳುವಳಿ’ ದೊಡ್ಡ ಸದ್ದು ಮಾಡಿತ್ತು, ಈಕೆ ಕೂಡ ಈ ಚಳುವಳಿಯನ್ನು ಮುನ್ನೆಡೆಸಿ ಕೆಲವರ ಛಳಿ ಬಿಡಿಸಿದ್ದರು. ಆದರೆ ಈಗ ಮೀಟೂ ಆರೋಪಿಗಳಿಂದ ತಾನು ಕಿರುಕುಳ ಅನುಭವಿಸುತ್ತಿರುವುದಾಗಿ ತನುಶ್ರೀ ಹೇಳಿಕೊಂಡಿದ್ದು, ಸಹಾಯ ಯಾಚಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ನನ್ನ ಬಾಲಿವುಡ್​ ಕೆಲಸವನ್ನು ಹಾಳುಗೆಡವಿದರು, ನಂತರ ನನ್ನ ಕುಡಿಯುವ ನೀರಿಗೆ ಔಷಧಿಗಳು ಮತ್ತು ಸ್ಟಿರಾಯ್ಡ್​ ಹಾಕಿ ಆರೋಗ್ಯ ಸಮಸ್ಯೆಗಳನ್ನು ಉಂಟಾಗುವಂತೆ ಮಾಡಿದರು. ನಾನು ಮೇ ತಿಂಗಳಲ್ಲಿ ಉಜ್ಜಯಿನಿಗೆ ಹೋಗುವಾಗ ನನ್ನ ವಾಹನದ ಬ್ರೇಕ್​ ಎರಡು ಬಾರಿ ಟ್ಯಾಂಪರ್ಡ್​ ಆಗಿ ಅಪಘಾತ ಮಾಡಲು ಯತ್ನಿಸಿದರು, ನಾನು ಸಾವಿನಿಂದ ಪಾರಾಗಿ ಬಂದು 40 ದಿನಗಳ ನಂತರ ಮುಂಬೈಗೆ ಮರಳಿದೆ. ಈಗ ನನ್ನ ಫ್ಲಾಟ್​ನ ಹೊರಗಿನ ನನ್ನ ಕಟ್ಟಡದಲ್ಲಿ ವಿಚಿತ್ರ ಅಸಹ್ಯಕರ ಸಂಗತಿಗಳು ನಡೆಯುತ್ತಿವೆ ಎಂದು ಆತಂಕ ಹೊರಹಾಕಿದ್ದಾರೆ.

ನಾನು ಖಚಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ, ನನ್ನ ವೃತ್ತಿ ಜೀವನದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಎತ್ತರಕ್ಕೆ ಏರಲು ಇಲ್ಲಿ ಇದ್ದೇನೆ ಎಂದ ಭಾವಾವೇಶದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್​ ಮಾಫಿಯಾ, ಮಹಾರಾಷ್ಟ್ರದ ರಾಜಕೀಯ, ರಾಷ್ಟ್ರ ವಿರೋಧಿ ಕ್ರಿಮಿನಲ್​ ಒಟ್ಟಾಗಿ ತೊಂದರೆ ನೀಡಲು ಈ ರೀತಿ ಕಾರ್ಯನಿರ್ವಹಿಸುತ್ತವೆ. ನಾನು ಬಹಿರಂಗಪಡಿಸಿದ ಮೀಟೂ ಆರೋಪಿಗಳು ಮತ್ತು ಎನ್​ಜಿಒ ಈ ಎಲ್ಲದರ ಹಿಂದೆ ಇದ್ದಾರೆ ಎಂದು ನನಗೆ ಖಚಿತವಾಗಿದೆ ಎಂದಿದ್ದಾರೆ.

ಇನ್ನಷ್ಟು ಅಂಶಗಳನ್ನು ಅವರು ಹೇಳಿಕೊಂಡಿದ್ದು, ಈ ಸಮಸ್ಯೆ ಸರಿಪಡಿಸಲು ಯಾರಾದರೂ ತನಗೆ ಸಹಾಯ ಮಾಡಬಹುದೇ ಎಂದು ಕೇಳುವ ಮೂಲಕ ಬರಹ ಮುಕ್ತಾಯಗೊಳಿಸಿದ್ದಾರೆ.

ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ವಿವಿಧ ಸಲಹೆಗಳನ್ನು ನೀಡಿದ್ದಾರೆ. ಇನ್ನು ಕೆಲವರು ಕೀಟಲೆಯ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...