alex Certify ಭ್ರಷ್ಟಾಚಾರದಿಂದ ಬೇಸತ್ತ ವ್ಯಕ್ತಿಯಿಂದ ತಹಶೀಲ್ದಾರ್​ ಕಾರಿಗೆ ಬೆಂಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟಾಚಾರದಿಂದ ಬೇಸತ್ತ ವ್ಯಕ್ತಿಯಿಂದ ತಹಶೀಲ್ದಾರ್​ ಕಾರಿಗೆ ಬೆಂಕಿ….!

ತಹಶೀಲ್ದಾರ್​ ಕಚೇರಿಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆಯು ತಮಿಳುನಾಡಿನ ಕಂದಾಚಿಪುರಂನಲ್ಲಿ ಭಾನುವಾರ ನಡೆದಿದೆ.
ತಹಶೀಲ್ದಾರ್​ ಬಳಕೆ ಮಾಡುತ್ತಿದ್ದ ಬೊಲೆರೋ ಎಸ್​ಯುವಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗಾಗಲೇ ಕಾರು ಸಂಪೂರ್ಣ ಸುಟ್ಟ ಕರಕಲಾಗಿತ್ತು ಎನ್ನಲಾಗಿದೆ.

ಈ ಸಂಬಂಧ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಕಾರಿನ ಸುತ್ತಮುತ್ತಲೂ ಕೈಯಲ್ಲಿ ಸುತ್ತಿಗೆ ಹಾಗೂ ಪೇಂಟ್​ ತಿನ್ನರ್​ ಹಿಡಿದು ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ವಾಹನದ ಕಿಟಕಿಯ ಗಾಜನ್ನು ಒಡೆದ ಆ ವ್ಯಕ್ತಿಯು, ಥಿನ್ನರ್​ನ್ನು ಕಾರಿನ ಒಳಗಡೆ ಸಿಂಪಡಿಸಿ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ

ತನಿಖೆ ವೇಳೆ ಆರೋಪಿಯು ತಹಶೀಲ್ದಾರ್​ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದಾನೆ. ತಹಶೀಲ್ದಾರ್​​ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರತಿ ಕೆಲಸಕ್ಕೂ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿದ್ದಾನೆ.

ಇದು ಮಾತ್ರವಲ್ಲದೇ ಪ್ರತಿಭಟನೆ ರೂಪವಾಗಿ ವ್ಯಕ್ತಿ ಕಚೇರಿಯ 20 ಕಿಟಕಿಗಳನ್ನು ಒಡೆದು ಹಾಕಿರೋದಾಗಿಯೂ ಹೇಳಿದ್ದಾನೆ. ಪೊಲೀಸರು ಈ ವ್ಯಕ್ತಿ ಮಾನಸಿಕ ಅಸ್ವಸ್ಥನಿರಬಹುದು ಎಂಧು ಅಂದಾಜಿಸಿದ್ದಾರೆ. ಈ ಸಂಬಂಧ ವೈದ್ಯಕೀಯ ಪರೀಕ್ಷೆಗೂ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...