alex Certify ಪ್ರೀತಿಸಿ ಮದುವೆಯಾದ ಪುತ್ರಿ: ಮನನೊಂದ ತಂದೆ-ತಾಯಿ ಸಾವಿಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪುತ್ರಿ: ಮನನೊಂದ ತಂದೆ-ತಾಯಿ ಸಾವಿಗೆ ಶರಣು

ಪತ್ನಿಗೆ ವಿಷ ನೀಡಿ ಸಾಯಿಸಿದ ಬಳಿಕ ಪತಿಯೂ ವಿಷ ಸೇವಿಸಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ತಿರುಪುರ ಜಿಲ್ಲೆಯ ಕುನ್ನಥುರ್​ನಲ್ಲಿ ನಡೆದಿದೆ.

ಪುತ್ರಿಯು ಮನೆಯವರ ಇಚ್ಛೆಯ ವಿರುದ್ಧವಾಗಿ ಪ್ರಿಯತಮನ ಜೊತೆ ವಿವಾಹವಾಗಿದ್ದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಮೃತರನ್ನು ಆರ್​. ಪೊನ್ನುಸ್ವಾಮಿ(65) ಹಾಗೂ ಪಿ.ಸುಮತಿ (55) ಎಂದು ಗುರುತಿಸಲಾಗಿದೆ. ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದ ಪುತ್ರಿ ಜನನಿ(22) ಕುನ್ನತ್ತೂರಿನ ಸಂಪತ್​ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ದಂಪತಿಯಿಂದ ವಿರೋಧವಿತ್ತು.
ಮಗಳ ಪ್ರೇಮ ವಿಚಾರದ ಬಗ್ಗೆ ತಿಳಿದ ಬಳಿಕ ಪೊನ್ನುಸ್ವಾಮಿ ಹಾಗೂ ಸುಮತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಓದಿನ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಮಗಳಿಗೆ ಬುದ್ಧಿವಾದವನ್ನೂ ಹೇಳಿದ್ದರು ಎನ್ನಲಾಗಿದೆ.

ಆದರೆ ಸೆಪ್ಟೆಂಬರ್​ 2ನೇ ತಾರೀಖಿನಂದು ಕೊಯಂಬತ್ತೂರಿನ ಕಾಲೇಜಿಗೆ ಬಂದ ಜನನಿ ತನ್ನ ಪೋಷಕರಿಗೆ ತಿಳಿಸದೇ ದೇವಸ್ಥಾನದಲ್ಲಿ ಸಂಪತ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು. ಮದುವೆ ಫೋಟೋವನ್ನು ಪೋಷಕರಿಗೆ ವಾಟ್ಸಾಪ್​ ಮೂಲಕ ಜನನಿ ಕಳುಹಿಸಿದ ಬಳಿಕವೇ ಪೋಷಕರಿಗೆ ಈ ವಿಚಾರ ತಿಳಿದಿದೆ.

ಅದೇ ದಿನ ರಾತ್ರಿ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ಒಂದೀಡಿ ದಿನ ಮನೆಯಿಂದ ಹೊರಬಾರದ್ದನ್ನು ಗಮನಿಸಿದ ಸಂಬಂಧಿಯೊಬ್ಬರು ಇವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ದಂಪತಿ ಸಾವಿಗೀಡಾದ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...