alex Certify ಮಾಧ್ಯಮಗಳಲ್ಲಿ ಬಿತ್ತರವಾದ ಸಾವಿನ ಸುದ್ದಿಗೆ ಸ್ವತಃ ತೆರೆ ಎಳೆದ ಅಬ್ದುಲ್​ ಘನಿ ಬರಾದಾರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮಗಳಲ್ಲಿ ಬಿತ್ತರವಾದ ಸಾವಿನ ಸುದ್ದಿಗೆ ಸ್ವತಃ ತೆರೆ ಎಳೆದ ಅಬ್ದುಲ್​ ಘನಿ ಬರಾದಾರ್​

ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್​ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​​ ಆಡಿಯೋ ಮೆಸೇಜ್​​​ ಕಳುಹಿಸುವ ಮೂಲಕ ತಮ್ಮ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ.

ತಾಲಿಬಾನ್​ ವಕ್ತಾರ ಮೊಹಮ್ಮದ್​ ನಯೀಮ್​​​ ಟ್ವಿಟರ್​ನಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾಲಿಬಾನ್​ ನಡುವಿನ ಘರ್ಷಣೆಯಲ್ಲಿ ಬರಾದಾರ್​​ ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ತಾಲಿಬಾನ್​ ಸಂಘಟನೆ ಹಂಚಿಕೊಂಡಿರುವ ಆಡಿಯೋ ಸಂದೇಶದಲ್ಲಿ ಬರಾದಾರ್​ ತಮ್ಮ ಸಾವಿನ ವಿಚಾರವು ಸಂಪೂರ್ಣ ಸತ್ಯಕ್ಕೆ ದೂರವಾದ ಸುದ್ದಿ ಎಂದು ಹೇಳಿದ್ದಾನೆ. ಬರಾದಾರ್​ಗೆ ಕೋವಿಡ್​ ಸೋಂಕು ತಗುಲಿದೆ ಅಥವಾ ಅವನನ್ನು ಬಾಂಬ್​ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಮಾಧ್ಯಮಗಳಲ್ಲಿ ನಾನು ಸಾವನ್ನಪ್ಪಿದ್ದೇವೆ ಎಂಬ ವಿಚಾರವು ಹರಿದಾಡಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಾನು ಪ್ರವಾಸದಲ್ಲಿದ್ದೆನು. ನಾವೆಲ್ಲರೂ ಕ್ಷೇಮವಾಗಿಯೇ ಇದ್ದೇವೆ. ಮಾಧ್ಯಮಗಳು ಯಾವಾಗಲೂ ಸುಳ್ಳು ವಿಚಾರಗಳನ್ನು ಪ್ರಚಾರ ಮಾಡುತ್ತವೆ. ಆದರೆ ಈ ಎಲ್ಲಾ ಸುಳ್ಳುಗಳನ್ನು ನಾನು ತಳ್ಳಿ ಹಾಕುತ್ತಿದ್ದೇನೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬ ಮಾತನ್ನು ನಾನು 100 ಪ್ರತಿಶತ ದೃಢೀಕರಿಸಿ ಹೇಳುತ್ತಿದ್ದೇನೆ ಎಂದು ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...