alex Certify ಹೆಂಡತಿ ಪ್ರತಿದಿನ ಸ್ನಾನ ಮಾಡದ್ದಕ್ಕೆ ವಿಚ್ಛೇದನ ಕೋರಿದ ಪತಿರಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಪ್ರತಿದಿನ ಸ್ನಾನ ಮಾಡದ್ದಕ್ಕೆ ವಿಚ್ಛೇದನ ಕೋರಿದ ಪತಿರಾಯ….!

ಆಲಿಘಡ: ವಿಚಿತ್ರ ಪ್ರಕರಣವೊಂದರಲ್ಲಿ, ಪತ್ನಿಯು ಪ್ರತಿದಿನ ಸ್ನಾನ ಮಾಡಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಆಲಿಘಡದಲ್ಲಿ ನಡೆದಿದೆ.

ಹೆಂಡತಿಯು ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ಕಾರಣಕ್ಕೆ ಪತ್ನಿಯಿಂದ ವಿಚ್ಛೇದನ ಕೋರಿದ್ದಾರೆ. ಈ ಬಗ್ಗೆ ದಂಪತಿಗೆ ಆಗಾಗ್ಗೆ ಜಗಳವಾಗಿದ್ಯಂತೆ. ಪ್ರತಿದಿನ ಸ್ನಾನ ಮಾಡುವುದಾಗಿ ಒಪ್ಪಿಕೊಂಡ ಪತ್ನಿ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಕ್ಕೆ ಬೇಸರಗೊಂಡ ಪತಿರಾಯ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ರೇವತಿ; ಮಗುವನ್ನು ಎತ್ತಿಕೊಂಡು ಮುದ್ದಾಡಿದ ನಿಖಿಲ್ ಕುಮಾರಸ್ವಾಮಿ

ತನ್ನ ದಾಂಪತ್ಯ ಬಾಂಧವ್ಯವನ್ನು ಉಳಿಸುವಂತೆ ಪತ್ನಿ ಆಲಿಘಡ ಮಹಿಳಾ ಸಮಿತಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಮತ್ತು ಸಂಬಂಧವನ್ನು ಉಳಿಸುವ ಸಲುವಾಗಿ ಸಮಿತಿಯು ದಂಪತಿ ಬಳಿ ಮಾತನಾಡುತ್ತಿದೆ. ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಯೋಚಿಸಲು ದಂಪತಿಗೆ ಸಮಯ ಕೊಡಲಾಗಿದೆ.

“ಮಹಿಳೆಯೊಬ್ಬರು ತಮ್ಮ ಪತಿ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ನೆಪವೊಡ್ಡಿ ವಿಚ್ಛೇದನ ಕೋರಿದ್ದಾರೆ. ನಾವು ದಂಪತಿಗಳಿಗೆ ಮತ್ತು ಅವರ ಪೋಷಕರಿಗೆ ಅವರ ಮದುವೆಯನ್ನು ಉಳಿಸಲು ಸಲಹೆ ನೀಡುತ್ತಿದ್ದೇವೆ” ಎಂದು ಮಹಿಳಾ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ತ್ರಿವಳಿ ತಲಾಖ್ ಅನ್ನು ಉಚ್ಚರಿಸಿರುವ ಅಮನ್, ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಒಂದು ವರ್ಷದ ಪುಟ್ಟ ಮಗುವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...