alex Certify ದೇವರ ವಿಗ್ರಹ ಕಣ್ಣು ಬಿಟ್ಟಿದೆ ಎಂಬ ವದಂತಿಗೆ ತಹಶೀಲ್ದಾರ್ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ವಿಗ್ರಹ ಕಣ್ಣು ಬಿಟ್ಟಿದೆ ಎಂಬ ವದಂತಿಗೆ ತಹಶೀಲ್ದಾರ್ ತೆರೆ

ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ದೇವರು ಕಣ್ಣು ಬಿಟ್ಟಿದೆ ಎಂಬ ವಿಚಾರವೊಂದು ಭಾರೀ ಸದ್ದು ಮಾಡಿತ್ತು. ಆದರೆ ಈ ಮೂಢನಂಬಿಕೆಗೆ ತೆರೆ ಎಳೆದಿರುವ ಕಾಗವಾಡ ತಹಶೀಲ್ದಾರ್​​ ಪ್ರಮಿಳಾ ದೇಶಪಾಂಡೆ ದೇವರ ಈ ಕೃತಕ ಕಣ್ಣನ್ನ ಪೂಜಾರಿ ಕೈನಿಂದಲೇ ತೆಗೆಸಿದ್ದಾರೆ.

ದೇವರ ಕಣ್ಣಿಗೆ ಕೃತಕ ಕಣ್ಣನ್ನ ಅಂಟಿಸಿ ದೇವರು ಕಣ್ಣು ಬಿಟ್ಟಿದ್ದಾನೆ ಎಂದು ಮೂಢನಂಬಿಕೆ ಹಬ್ಬಿಸಿದವರನ್ನ ತಹಶೀಲ್ದಾರ್​ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಪೂಜಾರಿ ಕೈನಿಂದಲೇ ದೇವರ ಕಣ್ಣನ್ನ ತೆಗೆಸಿದ್ದಾರೆ.

ಬೆಳ್ಳಂಬೆಳಗ್ಗೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸಂತೂಬಾಯಿ ದೇವರ ಮೂರ್ತಿ ಕಣ್ಣುಬಿಟ್ಟಿದೆ ಎಂಬ ಸುದ್ದಿ ತಿಳಿದು ಜನ ಬೆರಗಾಗಿದ್ದರು. ಇದಾದ ಬಳಿಕ ಊರಿಗೆಲ್ಲ ಈ ಸುದ್ದಿ ಮಿಂಚಿನ ವೇಗದಲ್ಲಿ ಹಬ್ಬಿದ್ದು ತಂಡೋಪತಂಡವಾಗಿ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸ್ತಾ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...