alex Certify ಭಾರಿ ಮಳೆಯಲ್ಲಿ ಕುದುರೆ ಸವಾರಿ ಮೂಲಕ ಆಹಾರ ವಿತರಿಸಿದ ಡೆಲಿವರಿ ಬಾಯ್: ಈತನ ಮಾಹಿತಿ ನೀಡಿದವರಿಗೆ ಸಿಗಲಿದೆ ಅತ್ಯಾಕರ್ಷಕ ಬಹುಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆಯಲ್ಲಿ ಕುದುರೆ ಸವಾರಿ ಮೂಲಕ ಆಹಾರ ವಿತರಿಸಿದ ಡೆಲಿವರಿ ಬಾಯ್: ಈತನ ಮಾಹಿತಿ ನೀಡಿದವರಿಗೆ ಸಿಗಲಿದೆ ಅತ್ಯಾಕರ್ಷಕ ಬಹುಮಾನ..!

ಸಾಮಾನ್ಯವಾಗಿ ಆಹಾರ ವಿತರಣಾ ಸಿಬ್ಬಂದಿ ಬೈಕ್ ಅಥವಾ ಸೈಕಲ್ ನಲ್ಲಿ ಬರುವುದು ಸಾಮಾನ್ಯ. ಆದರೆ, ದೇಶದ ವಾಣಿಜ್ಯ ನಗರಿ ಮುಂಬೈನ ಭಾರಿ ಮಳೆಯಲ್ಲಿ ಆಹಾರವನ್ನು ತಲುಪಿಸಲು ಕುದುರೆಯನ್ನು ಸಾರಿಗೆ ವಿಧಾನವಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಬಳಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆಹಾರ ವಿತರಣೆಗಾಗಿ ಈ ವ್ಯಕ್ತಿ ಮಾಡಿರೋ ಉಪಾಯಕ್ಕೆ ಇಂಟರ್ನೆಟ್ ಸಾಕಷ್ಟು ಪ್ರಭಾವಿತವಾಗಿದೆ. ಈ ಧೀರನ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಸ್ವಿಗ್ಗಿ ಸಂಸ್ಥೆ ಭರವಸೆ ನೀಡಿದೆ. ಕುದುರೆಯಲ್ಲಿ ಈ ಮಳೆಯಲ್ಲಿ ಸವಾರಿ ಮಾಡಿದಾತ ಯಾರು..? ಮಳೆಗಾಲದ ಸಮಯದಲ್ಲಿ, ಜನನಿಬಿಡ ಮುಂಬೈ ರಸ್ತೆಯನ್ನು ಅವನು ಹೇಗೆ ದಾಟುತ್ತಾನೆ? ಆಹಾರವನ್ನು ಗ್ರಾಹಕರಿಗೆ ವಿತರಿಸುವಾಗ ಆತ ತನ್ನ ಕುದುರೆಯನ್ನು ಎಲ್ಲಿ ನಿಲ್ಲಿಸಿದ್ದ ಎಂದು ಸ್ವಿಗ್ಗಿ ಸಂಸ್ಥೆ ಕೆಲವು ಪ್ರಶ್ನೆಗಳನ್ನು ಕೇಳಿದೆ.

ಈ ಅನಾಮಧೇಯ ವ್ಯಕ್ತಿಯ ಬಗ್ಗೆ ಸ್ವಿಗ್ಗಿ ಕುದುರೆಯೇರಿದ ಡೆಲಿವರಿ ಬಾಯ್ ನ ಹೆಚ್ಚಿನ ಮಾಹಿತಿ ಪಡೆಯಲು ಪ್ರಾರಂಭಿಸಿದೆ. ಆಕಸ್ಮಿಕ ಬ್ರ್ಯಾಂಡ್ ಅಂಬಾಸಿಡರ್ ಬಗ್ಗೆ ಕೆಲವು ಉಪಯುಕ್ತ ಮಾಹಿತಿಯನ್ನು ನೀಡುವ ಮೊದಲ ವ್ಯಕ್ತಿಗೆ ಐದು ಸಾವಿರ ರೂ. ಬಹುಮಾನವನ್ನು ಘೋಷಿಸಿದೆ.

ಸ್ವಿಗ್ಗಿಯಿಂದ ಈ ಹೇಳಿಕೆ ಹೊರಬಿದ್ದ ಕೂಡಲೇ ಜನರು ಜನರು ಮಾಹಿತಿಯನ್ನು ಸಂಗ್ರಹಿಸಲು ಅಥವಾ ಅವರಿಗೆ ತಿಳಿದಿರುವದನ್ನು ನೀಡಲು ಪ್ರಯತ್ನಿಸಿದರು. ಇತರರು ಪೋಸ್ಟ್‌ನಲ್ಲಿ ಉಲ್ಲಾಸದ ಮೆಮ್‌ಗಳು ಮತ್ತು ಜೋಕ್‌ಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

— Prithingar (@prithingar) July 5, 2022

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...