alex Certify ಶಾಕಿಂಗ್​​: ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಖುಷಿಗೆ ಪ್ರತಿಸ್ಪರ್ಧಿಯನ್ನೇ ಕೊಂದ ಬೆಂಬಲಿಗರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​​: ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಖುಷಿಗೆ ಪ್ರತಿಸ್ಪರ್ಧಿಯನ್ನೇ ಕೊಂದ ಬೆಂಬಲಿಗರು…..!

ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಗೆದ್ದ ವ್ಯಕ್ತಿಯ ಬೆಂಬಲಿಗರು ಹತ್ಯೆ ಮಾಡಿದ ಘಟನೆಯು ಬಿಹಾರದ ಪೂರ್ವ ಚಂಪಾರಣ್​​ನಲ್ಲಿ ನಡೆದಿದೆ. ಪೂರ್ವ ಚಂಪಾರಣ್​ ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ 50 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

ಮೃತ ವ್ಯಕ್ತಿಯನ್ನು ಬಬುಲ್​ ಹಾಸನ್​ ಎಂದು ಗುರುತಿಸಲಾಗಿದೆ. ಚುನಾವಣೆಯಲ್ಲಿ 45 ವರ್ಷದ ಇಮ್ಯಾನ್ಯುವಲ್​ ಹಸನ್​ ವಿಜೇತರಾಗಿದ್ದರೆ ಮೃತ ಬಬುಲ್​ ಎರಡನೇ ಸ್ಥಾನ ಪಡೆದಿದ್ದರು.

ಇಮ್ಯಾನುವಲ್​ ಹಸನ್​ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಬಾಬುಲ್​ ಹಸನ್​ ವಿರುದ್ಧ ಇಮ್ಯಾನುಬಲ್​ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವಾಗಿ ಇಬ್ಬರು ಗುಂಪುಗಳ ನಡುವೆ ವಾಗ್ವಾದ ಕೂಡ ಏರ್ಪಟ್ಟಿತ್ತು ಎಂದು ರಕ್ಸಾಲ್​ ಉಪವಿಭಾಗೀಯ ಪೊಲೀಸ್​ ಅಧಿಕಾರಿ ಚಂದ್ರಪ್ರಕಾಶ್​ ಹೇಳಿದ್ದಾರೆ.

ಕೋಪದ ಭರದಲ್ಲಿ ಗೆದ್ದ ಸದಸ್ಯನ ಗುಂಪು ಬಾಬುಲ್ ಹಸನ್​​ಗೆ ರಾಡ್​ನಿಂದ ಹೊಡೆದು ತೀವ್ರವಾಗಿ ಗಾಯ ಮಾಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬುಲ್​ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಚಂದ್ರಪ್ರಕಾಶ್​ ಹೇಳಿದ್ರು.

ಆದರೆ ಈ ಘಟನೆಯ ಬಳಿಕ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮದಲ್ಲಿ ಪೊಲೀಸರನ್ನು ಭದ್ರತೆಗೆಂದು ನೇಮಿಸಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಚಂದ್ರಪ್ರಕಾಶ್ ಹೇಳಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...