alex Certify ಲವ್ ಮ್ಯಾರೇಜ್ ಗೆ ಅಡ್ಡಿಯಾದ ಕುಜದೋಷ: ಮಹಿಳಾ ಪೊಲೀಸ್ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್ ಮ್ಯಾರೇಜ್ ಗೆ ಅಡ್ಡಿಯಾದ ಕುಜದೋಷ: ಮಹಿಳಾ ಪೊಲೀಸ್ ದುಡುಕಿನ ನಿರ್ಧಾರ

ಶಿವಮೊಗ್ಗ: ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಕಲ್ಲಾಪುರದ ಸುಧಾ(29) ಮೃತಪಟ್ಟವರು.

ಅರಣ್ಯ ಇಲಾಖೆ ನೌಕರ ಬೆಳಗಾವಿಯ ಪ್ರವೀಣ್ ಅವರನ್ನು ಆರು ವರ್ಷಗಳಿಂದ ಸುಧಾ ಪ್ರೀತಿಸಿದ್ದರು. ಜಾತಿ ಬೇರೆಯಾಗಿದ್ದರು ಇವರ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಆದರೆ, ಪ್ರವೀಣ್ ಅವರ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಗೆ ತೋರಿಸಿದಾಗ ಯುವತಿತ್ತಿಗೆ ಕುಜದೋಷವಿದ್ದು, ಆಕೆಯೊಂದಿಗೆ ಮದುವೆ ಮಾಡಿದರೆ ಮಗನ ಆಯಸ್ಸು ಕಡಿಮೆಯಾಗಲಿದೆ. ಆತ ಸಾಯುತ್ತಾನೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಪ್ರವೀಣ್ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪ್ರವೀಣ್ ಕೂಡ ದೂರವಾಗತೊಡಗಿದ್ದ. ಇದರಿಂದಾಗಿ ಮನನೊಂದ ಸುಧಾ ಮೇ 31ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸುಧಾ ಅವರೊಂದಿಗೆ ವಿಷ ಸೇವಿಸುವ ನಾಟಕವಾಡಿದ ಪ್ರವೀಣ್ ಆಕೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ಸುಧಾ ಕುಟುಂಬದವರು ಆರೋಪಿಸಿದ್ದು, ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...