alex Certify ದಿನಗೂಲಿ ನೌಕರರಿಗೆ 10 ಸಾವಿರ ರೂ., ಸಂಕಷ್ಟಕ್ಕೊಳಗಾದ ಮೃಗಾಲಯ ಸಿಬ್ಬಂದಿಗೆ ಸುಧಾಮೂರ್ತಿ ನೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಗೂಲಿ ನೌಕರರಿಗೆ 10 ಸಾವಿರ ರೂ., ಸಂಕಷ್ಟಕ್ಕೊಳಗಾದ ಮೃಗಾಲಯ ಸಿಬ್ಬಂದಿಗೆ ಸುಧಾಮೂರ್ತಿ ನೆರವು

ಮೈಸೂರು: ಸಮಾಜಮುಖಿ ಕಾರ್ಯಗಳ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ದಿನಗೂಲಿ ನೌಕರರಿಗೆ ತಲಾ 10,000 ರೂ. ನೀಡಿದ್ದಾರೆ.

ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ದಿನಗೂಲಿ ನೌಕರರಿಗೆ ಹಣಕಾಸು ನೆರವು ನೀಡಲಾಗಿದೆ. 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂಪಾಯಿ ನೀಡಲಾಗಿದೆ. ಮೃಗಾಲಯದಲ್ಲಿನ ಪ್ರಾಣಿಗಳ ಪೋಷಣೆ ನಿರ್ವಹಣೆಗಾಗಿ 60 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಸುಧಾಮೂರ್ತಿ ಅವರು ಗೊರಿಲ್ಲಾಗಳ ಆವರಣ ನಿರ್ಮಿಸಿ ಕೊಡುತ್ತಿದ್ದಾರೆ. ಇದರೊಂದಿಗೆ 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂ. ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...